“ಹಗ್ಗಿನ ಹನಿಯನ್ನು …ಬೊಗಸೆಯಲಿ ಹಿಡಿಯೋಣ” 

ಬ್ರಹ್ಮಾವರ: “ಹಗ್ಗಿನ ಹನಿಯನ್ನು …ಬೊಗಸೆಯಲಿ ಹಿಡಿಯೋಣ” ಯಡ್ತಾಡಿ ದಾರಿಯಲ್ಲಿ ಈ ಫಲಕಗಳು ಹೊಸ ಸಂಚಲನ ಮೂಡಿಸಿದೆ. ಹೌದು ಈ ಬಾರಿಯ ಬ್ರಹ್ಮಾವರ ತಾಲೂಕಿನ 2ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಪ್ರಚಾರ ದೊರೆತಿದೆ.

 ಬ್ರಹ್ಮಾವರ ತಾಲೂಕಿನ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ದಶಮ ಸಡಗರ ಶ್ರೀ ವಿನಾಯಕ ಯುವಕ ಮಂಡಲದ ಹಲವು ಸಂಸ್ಥೆ ಗಳ ಸಹಯೋಗದೊಂದಿಗೆ ಜನವರಿ 24ರಂದು ಭಾನುವಾರ ಬೆಳಿಗ್ಗೆ ಎಂಟರಿಂದ ಮಹಾತ್ಮ ಗಾಂಧಿ ಪ್ರೌಢಶಾಲೆ ಸಾಯಿಬರಕಟ್ಟೆಯಲ್ಲಿ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ,ಸಂಶೋಧಕ ಬಾಬು ಶಿವಪೂಜಾರಿ ಬಾರ್ಕೂರು ಇರಲಿದ್ದಾರೆ.

ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ, ಕನ್ನಡ ಗೀತಗಾಯನ ಕುಂದಾಪುರ ಕನ್ನಡದ ಕನ್ನಡದ ಹರಟೆ ಸಂಪನ್ನಗೊಳ್ಳಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply