ರಂಗಕರ್ಮಿ ಜಯಕರ್ ಮಣಿಪಾಲರವರ ನೂತನ ಕೃತಿ ವಿಜಯಧಾರ ಬಿಡುಗಡೆ

ಮಣಿಪಾಲ ಮಂಚಿಕೆರೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಜಯಕರ್ ಮಣಿಪಾಲ ರವರ ನೂತನ ವಿಜಯಧಾರ (ಕರ್ಣ ಪರ್ವ) ನಾಟಕ ಕೃತಿ ಯನ್ನು ನಿಕಟ ಪೂರ್ವ ಬಡಗುಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಶಾಂತಾರಾಮ್ ಶೆಟ್ಟಿ ಯವರು ಬಿಡುಗಡೆ ಗೊಳಿಸಿದರು.

ಬಳಿಕ ಮಾತನಾಡಿದ ಕೃತಿಯ ಬರಹಗಾರ ಜಯಕರ್ ರವರು ರಂಗಪ್ರದರ್ಶನಗಳ ಒಳ ತಿರುಳುಗಳನ್ನು ಅದರ ವಿಭಿನ್ನತೆಯನ್ನು ಹಳ್ಳಿಯ ವಾತಾವರಣಗಳಿಗೆ ವಿಸ್ತರಿಸಿ ಅಲ್ಲಿನ ಪ್ರತಿಭೆಗಳಿಗೆ ರಂಗ ನಾಟಕಗಳನ್ನು ಪರಿಚಯಿಸಿ ಅವರಿಂದಲೇ ನಾಟಕ ಪ್ರದರ್ಶನಗಳನ್ನು ಪ್ರಸ್ತುತ ಪಡಿಸುವ ಉದ್ದೇಶದಿಂದ ಈ ವಿನೂತನ ಪ್ರಯತ್ನಗಳು ನಡೆಯುತ್ತಿವೆ. ಈ ಕಾರಣದಿಂದ ಇದರ ಚಾಲನೆಯನ್ನು ಗ್ರಾಮ ಮಟ್ಟದಲ್ಲಿಯೇ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಉಡುಪಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಖ್ಯಾತ ಉದ್ಯಮಿ ಬಳ್ಕೂರು ಗೋಪಾಲ್ ಆಚಾರ್ಯ, ರಂಗ ನಿರ್ದೇಶಕರುಗಳಾದ  ರವಿರಾಜ್ ಎಚ್ ಪಿ, ಸೋಮನಾಥ್ ಚಿಟ್ಪಾಡಿ, ರಾಘವೇಂದ್ರ ಕಟಪಾಡಿ, ಯೋಗೀಶ್ ಕೊಳಲಗಿರಿ ಮತ್ತಿತರರು ಹಾಜರಿದ್ದರು. ವಿಶ್ವಮೂರ್ತಿ ವಂದಿಸಿದರು.

 
 
 
 
 
 
 
 
 
 
 

Leave a Reply