ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ದಿನದರ್ಶಿಕೆ ಲೋಕಾರ್ಪಣೆ

ಮೈಸೂರು: ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ದಿನದರ್ಶಿಕೆ (ಕ್ಯಾಲೆಂಡರ್‌) ಬಿಡುಗಡೆ ಕಾರ್ಯಕ್ರಮವನ್ನು ಸರಸ್ವತಿಪುರ೦ನಲ್ಲಿರುವ ಶ್ರೀಕೃಷ್ಣಧಾಮ ಆವರಣದಲ್ಲಿ 
ಹಮ್ಮಿಕೊಳ್ಳಲಾಗಿತ್ತು.  ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣಗೌಡ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ವಾರ ತಿಥಿ ನಕ್ಷತ್ರ ನೋಡಲು ದಿನದರ್ಶಿಕೆ ಸಹಕಾರಿಯಾಗುತ್ತದೆ. 
ಪ್ರತಿನಿತ್ಯ ನಮ್ಮ ಜೀವನದ ಆರ್ಥಿಕ ಆರೋಗ್ಯ ಪರಿಸ್ಥಿತಿ ಸಮತೋಲನವಾಗಿ ನಿಭಾಯಿಸುವಲ್ಲಿ ಸಮಯ ಶಿಸ್ತು ಪರಿಪಾಲನೆಗೆ ಕ್ಯಾಲೆಂಡರ್‌ ಬಹುಮುಖ್ಯವಾಗಿದೆ. ನಮ್ಮೆಲ್ಲರ ಮನೆಗಳಲ್ಲಿ ದಿನಪತ್ರಿಕೆ ಗಡಿಯಾರ ಮತ್ತು ಕ್ಯಾಲೆಂಡರ್‌ ಮೂಲಕವೇ ಮನುಷ್ಯನ ಜೀವನದ ದೈನಂದಿನ ಚಟುವಟಿಕೆಗೆ ಪ್ರಾರಂಭವಾಗುವುದು ಎಂದು ಹೇಳಿದರು.

ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಘದ ಅದ್ಯಕ್ಷ ರವಿಶಾಸ್ತ್ರಿ, ಗೌ.ಅದ್ಯಕ್ಷ ಎಂ.ಕೆ ಪುರಾಣಿಕ್‌, ವಿಟಲ್‌ ಐ.ಎಂ, ಜಗದೀಶ್‌ ಹೆಬ್ಬಾರ್‌, ಎಂ.ಆರ್‌ ಪುರಾಣಿಕ್‌, ಸುಪ್ರಭಾಭಟ್‌ ಹಾಗೂ ಬಿ.ಕೆ ಜಗದೀಶ ಹಾಗೂ ಇನ್ನಿತರರು ಹಾಜರಿದ್ದರು.

 
 
 
 
 
 
 
 
 
 
 

Leave a Reply