ಉಡುಪಿ: ಭಗಿನಿ ಮಹಿಳಾ ಮಂಡಳಿ (ರಿ) ಪರ್ಕಳ ,ಕನ್ನಡ ಹಾಗು ಸಂಸ್ಕೃತಿ ಇಲಾಖೆ , ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ಹಾಗೂ ಬಡಗು ಬೆಟ್ಟು ಕೋ – ಆಪರೇಟಿವ್ ಸೊಸೈಟಿ ,ಉಡುಪಿ , ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ ) ಉಡುಪಿ “ತೊಟ್ಟಿಲು ತೂಗುವ ಕೈಗಳು “ಮಹಿಳಾ ಸಾಧಕಿಯರೊಂದಿಗೆ ಸುಂದರ ಸಂಜೆ ಕಾರ್ಯಕ್ರಮ ಶನಿವಾರ ನಡೆಯಿತು.
ವಿವಿಧ ಕ್ಷೇತ್ರ ಗಳ ಸಾಧಕಿಯರಾದ ವೈಲೆಟ್ ಫೆಮಿನಾ(ಪೊಲೀಸ್ ಸಬ್ -ಇನ್ಸ್ಪೆಕ್ಟರ್ ), ಕಾತ್ಯಾಯಿನಿ ಕುಂಜಿಬೆಟ್ಟು(ಸಾಹಿತಿಗಳು ), ಸುಗುಣ ಸುವರ್ಣ(ಉದ್ದಿಮೆದಾರರು) ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಕರ ಶೆಟ್ಟಿ ಇಂದ್ರಾಳಿ ಯವರು ವಹಿಸಿದ್ದು, ವಿಶ್ವನಾಥ ಶೆಣೈ, ಗೀತಾಶ್ರಿ ಉಪಾಧ್ಯಾಯ ಹಾಗೂ ಡಾ.ಹರೀಶ್ ಜೋಶಿ ವಿಟ್ಲರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಭಾವಗಾಯನ – ಪೂಜಾ ಉಡುಪ, ಸುರೇಖ ಭಟ್ ಹಾಗೂ ಪವಿತ್ರ ರವರಿಂದ ನಡೆಯಿತು ನಂತರ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ (ರಿ ) ಪರ್ಕಳದಿಂದ “ನನ್ನೊಳಗಿನ ಅವಳು” ಶಿಲ್ಪಾ ಜೋಶಿ ಯವರ ಏಕವ್ಯಕ್ತಿ ಪ್ರದರ್ಶನ ನಡೆಯಿತು.