ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕ ಕಳೆದ ಬಾರಿ ಕೋವಿಡ್ ಲಾಕ್ ಡೌನ್ ಸಂದರ್ಭ ದಲ್ಲಿ ಸುಮಾರು 650 ಕ್ಕೂ ಹೆಚ್ಚು ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ನಮ್ಮೂರು ಬಾರ್ಕುರು ಫೇಸ್ಬುಕ್ ಸ್ನೇಹಿತರ ನೆರವಿನಿಂದ ವಿತರಿಸಲಾಗಿತ್ತು.
ಈ ಫೇಸ್ಬುಕ್ ಗ್ರೂಪಿನಲ್ಲಿ ಇರುವ ದಾನಿಗಳ ನೆರವಿನಿಂದ ಯಾವುದೇ ಅಬ್ಬರದ ಚಾರಗಳಿಲ್ಲದೇ ನೇರವಾಗಿ ಸಂಕಷ್ಟದಲ್ಲಿದ್ದವರ ಮನೆಗೆ ಕಿಟ್ ಗಳನ್ನು ತಲುಪಿಸಿ ಸುದ್ದಿಯಾಗಿದ್ದ ನಮ್ಮೂರು ಬಾರ್ಕುರು ಫೇಸ್ಬುಕ್ ಗ್ರೂಪ್ ನ ಗೆಳೆಯರು ಈ ಬಾರಿ ಮತ್ತೊಮ್ಮೆ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿ ಸುದ್ಧಿಯಲ್ಲಿದ್ದಾರೆ.
ಈ ಬಾರಿ ಗ್ರೂಪಿನಲ್ಲಿ ಇರುವ ದಾನಿಗಳ ನೆರವಿನಿಂದ ಸುಮಾರು ಎರಡು ಲಕ್ಷ ರೂಪಾಯಿ ಗಳನ್ನು ಬಾರಕೂರು ಪರಿಸರದಲ್ಲಿ ಸಂಕಷ್ಟದಲ್ಲಿರುವ ಸುಮಾರು 50 ಕುಟುಂಬಗಳಿಗೆ ತಲಾ ರೂ 4000/- ದಂತೆ ವಿತರಿಸಲಾಗಿದೆ.
ಈ ಸಹಾಯವನ್ನು ಕೂಡ ಯಾವುದೇ ಪ್ರಚಾರವಿಲ್ಲದೇ ಫೋಟೋ ವಿಡಿಯೋಗಳ ಅಬ್ಬರ ಇಲ್ಲದೇ ನೇರವಾಗಿ ಸಂಕಷ್ಟದಲ್ಲಿರುವವರ ಮನೆಗಳಿಗೆ ಗ್ರೂಪಿನ ಸದಸ್ಯರು ಹೋಗಿ ವಿತರಣೆ ಮಾಡಿ ಬಂದಿರುತ್ತಾರೆ. ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ನಮ್ಮೂರು ಬಾರಕೂರು ಫೇಸ್ಬುಕ್ ಗ್ರೂಪಿನ ದಾನಿಗಳೇ ಕಾರಣ ಯಾವಾಗಲೂ ನೊಂದವರ ಸಹಾಯಕ್ಕೆ ಯಾವುದೇ ಪ್ರಚಾರ ಬಯಸದ ಮಾನವೀಯ ಗುಣದ ದಾನಿಗಳ ಸಹಕಾರ ಈ ಒಂದು ಕಾರ್ಯಕ್ರಮ ನಡೆಸಲು ಪ್ರೇರಣೆಯಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರು ತಿಳಿಸಿದ್ದಾರೆ.
ಆಲ್ವಿನ್ ಅಂದ್ರಾದೆ, ಗಣೇಶ್ ಶೆಟ್ಟಿ, ಆನಂದ್ ಕುಮಾರ್ , ಹರೀಶ್ ಆಚಾರ್ಯ , ಸವಿತಾ ಫುಟಾರ್ದೋ, ಹೇಮಂತ್ ಶ್ರೀಯಾನ್ , ಉದಯ್ ಪೂಜಾರಿ ಬಾರಕೂರು ಇವರೆಲ್ಲರೂ ಸೇರಿ ಈ ಒಂದು ಕಾರ್ಯಕ್ರಮ ಸಂಘಟಿಸುವುದರೊಂದಿಗೆ ಮನೆಗಳಿಗೆ ತೆರಳಿ ಧನಸಹಾಯ ವಿತರಿಸಿದ್ದಾರೆ. ಪ್ರಪಂಚದಾದ್ಯಂತ ಹರಡಿರುವ ಸುಮಾರು 10 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ನಮ್ಮೂರು ಬಾರ್ಕುರು ಫೇಸ್ಬುಕ್ ಸ್ನೇಹಿತರ ಈ ಕೆಲಸ ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ.
ಅಲ್ಲದೇ ಸಾಮಾಜಿಕ ಜಾಲ ತಾಣಗಳು ತನ್ಮೂಲಕ ಸಮಾಜದ ಸಂಕಷ್ಟಗಳಿಗೆ ಹೇಗೆ ನೇರವಾಗಬಹುದು ಅನ್ನುವುದಕ್ಕೆ ಮಾದರಿಯಾಗಿದೆ.