ಸರಕಾರಿ ಪದವಿ ಪೂರ್ವ ಕಾಲೇಜು ತೆಂಕನಿಡಿಯೂರು ಇಲ್ಲಿ ಸ್ವಚ್ಛಭಾರತ ಮಿಷನ್

ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ತೆಂಕನಿಡಿಯೂರು ಇಲ್ಲಿ ದಿನಾಂಕ 17/2/2022 ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಉಡುಪಿ ಹಾಗೂ ತೆಂಕನಿಡಿಯೂರು ಗ್ರಾಮ ಪಂಚಾಯತ್ ವತಿಯಿಂದ ಜಲಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಸ್ವಚ್ಛಭಾರತ ಮಿಷನ್, ಬೂದು ಬಣ್ಣದ ನೀರಿನ ಬಳಕೆ, ನೀರಿನ ಸದ್ಭಳಕೆ, ನೀರಿನ ಸಂರಕ್ಷಣೆಯ ಬಗ್ಗೆ ಕಿರುಚಿತ್ರ ಪ್ರದರ್ಶನ ನಡೆಸಲಾಯಿತು. ಸಮಗ್ರ ಮಾಹಿತಿಯನ್ನು ಜೆಜೆಎಂನ ಐಇಸಿ ಎಕ್ಸ್ ಪರ್ಟ್ ಆದ ಶ್ರೀಮತಿ ನೇತ್ರಾವತಿ ಅವರು ನೀಡಿದರು. ನಂತರ ಜಲಮೂಲ ಸಂರಕ್ಷಣಾ ಅಭಿಯಾನ ನಡೆಸಲಾಯಿತು. ಮಳೆ ನೀರಿನ ಕೊಯ್ಲು , ನೀರಿನ ಮಿತ ವ್ಯಯ ಕುರಿತಂತೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ‌ ಭಾಗವಹಿಸಿದ್ದರು.ಶ್ರೀಮತಿ ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply