ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ದೃಶ್ಯ ಮಾಧ್ಯಮ ಅತ್ಯಂತ ಪ್ರಬಲವಾಗಿ ಬೆಳೆಯುತ್ತಿದೆ. ಏನಾದರೂ ಘಟನೆ ನಡೆದ ನಿಮಿಷ ಮಾತ್ರದಲ್ಲಿ ಎಲ್ಲರ ಮೊಬೈಲ್ ನಲ್ಲಿ ಆ ದೃಶ್ಯ ವೀಕ್ಷಣೆಗೆ ಸಿಗುತ್ತದೆ ಎಂದು ಕೊಡವೂರು ಶ್ರೀಶಂಕರಣರಾಯಣ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಹೇಳಿದರು.
ಅವರು ಕೊಡವೂರು ದೇವಳದ ವಸಂತ ಮಂಟಪದಲ್ಲಿ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಷಿಯೇಶನ್ ಉಡುಪಿ ವಲಯ ಆಯೋಜಿಸಿದ್ದ ” ವಿಡಿಯೋ ಕ್ಯಾಮೆರಾ ಕಾರ್ಯಾಗಾರ‘ ದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಎಸ್ ಕೆಪಿಎ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಮಾತನಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಹೊಸ ಹೊಸ ಆವಿಷ್ಕಾರಗಳು ದಿನಕೊಂದರಂತೆ ಬರುತ್ತಿದೆ. ಅಷ್ಟೇ ವೇಗದಲ್ಲಿ ವೃತ್ತಿಪರ ಛಾಯಾಗ್ರಾಹಕರು ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು . ವಲಯಗಳು ಇಂತಹ ಉಚಿತ ಕಾರ್ಯಾಗಾರವನ್ನು ಮಾಡುವಾಗ ನಾವೆಲ್ಲ ಭಾಗವಹಿಸಿ, ನಾವು ಬೆಳೆಯಬೇಕು ಎಂದು ಕರೆ ಇತ್ತರು.
ಈ ಸಂದರ್ಭದಲ್ಲಿ ವಲಯ ಗೌರವಾಧ್ಯಕ್ಷ ಶಿವ ಕೆ. ಅಮೀನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ಕಾರ್ಯಾಗಾರ ನಡೆಸಿಕೊಟ್ಟ ತಜ್ಞರಾದ ಅನಿಲ್ ಲಕ್ಷ್ಮಣ್, ಪ್ರದೀಪ್ ಅಡಿಗ, ಸೌಂಡ್ ಇಂಜಿನಿಯರ್ ಉಮೇಶ್ ಪ್ರಭು ಉಪಸ್ಥಿತರಿದ್ದರು.
ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು ನಿರೂಪಿಸಿದರು. . ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಕೇಶ್ ಅಮೀನ್ ಧನ್ಯವಾದವಿತ್ತರು. ಸುಮಾರು 60 ಶಿಭಿರಾರ್ಥಿಗಳು ಕಾರ್ಯಾಗಾರದ ಸದುಪಯೋಗವನ್ನು ಪಡೆದರು. ಸುಂದರ್ ಉಡುಪಿ ಕೊಳಲು ವಾದನದ ಮೂಲಕ ದೇವರನ್ನು ಪ್ರಾರ್ಥಿಸಿದರು.