ವೃತ್ತಿ ಉಳಿದರೆ ಮಾತ್ರ ಸಂಘಟನೆ ಉಳಿಸಲು ಸಾಧ್ಯ~ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ 

ವೃತ್ತಿ ಉಳಿದರೆ ಮಾತ್ರ ಸಂಘಟನೆ ಉಳಿಸಲು ಸಾಧ್ಯ.  ವೃತ್ತಿ ಉಳಿಸಲು ಸಂಘಟನೆ ಅತ್ಯಗತ್ಯ. ಸದಸ್ಯರು ವೃತ್ತಿಗೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ಹೆಚ್ಚು ಹೆಚ್ಚು ಪಾಲ್ಗೊಂಡು ಪ್ರಸ್ತುತ ತಂತ್ರಜ್ಞಾನದ ಬಗ್ಗೆ ಅನುಭವ ಪಡೆಯುದು ಅತೀ ಅಗತ್ಯ ಎಂದು ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ (ರಿ) ದಕ್ಷಿಣ ಕನ್ನಡ – ಉಡುಪಿ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ ಶೆಟ್ಟಿಗಾರ್ ಜಿಲ್ಲೆಯ ವತಿಯಿಂದ ಸದಸ್ಯರಿಗಾಗಿ ಆಯೋಜಿಸಿದ್ದ ಆಲ್ಬಮ್ ಡಿಸೈನಿಂಗ್ {lightroom} ಕಾರ್ಯಗಾರವನ್ನು ಉಡುಪಿ ಕಿನ್ನಿಮುಲ್ಕಿಯ ವೀರಭದ್ರ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.  

ಸಂಪನ್ಮೂಲ ವ್ಯಕ್ತಿ ಖ್ಯಾತ ಆಲ್ಬಮ್ ಡಿಸೈನರ್ ಪ್ರಮೋದ್ ಉಚ್ಚಿಲ್ ರವರು ಸದಸ್ಯರಿಗೆ ಲೈಟ್ ರೂಮ್ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ  ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ಉಡುಪಿ ವಲಯಾಧ್ಯಕ್ಷ ಪ್ರಕಾಶ್ ಶೇರಿಗಾರ್, ಬ್ರಹ್ಮಾವರ ವಲಯಾಧ್ಯಕ್ಷ ಹೆರಿಕ್ ಡಿಸೋಜ, ಹಿರಿಯ ಸದಸ್ಯ ಭಕ್ತಪ್ರಸಾದ್ ಕಾಪು  ಉಪಸ್ಥಿತರಿದ್ದರು. 
ಎಸ್.ಕೆ.ಪಿ.ಎ ಜಿಲ್ಲಾ ಸಂಘಟನಾ  ಕಾರ್ಯದರ್ಶಿ ಸುಂದರ್ ಕೊಳಲಗಿರಿ ಸ್ವಾಗತಿಸಿದರು.  ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕಾಪು ಧನ್ಯವಾದವಿತ್ತರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು
 
 
 
 
 
 
 
 
 
 
 

Leave a Reply