ಇದೇ ಸಂದರ್ಭದಲ್ಲಿ ಸಂಶೋಧಕ ಪ್ರೊ. ಕೃಷ್ಣಯ್ಯ ಅವರು ನಮ್ಮ ಪುರಾಣಗಳಲ್ಲಿ ಪಂಚವಟಿಯಲ್ಲಿ ಇತ್ತು ಎನ್ನಲಾದ ಅರವತ್ತು ನಾಲ್ಕು ವರ್ಷಗಳಿಗೊಮ್ಮೆ ಹೂ, ಕಾಯಿ ಬಿಡುವ ಅಪರೂಪದ ಔಷಧೀಯ ತಳಿ 75 ಶ್ರೀತಾಳೆ ಗಿಡಗಳನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಯು ವಿಶ್ವನಾಥ್ ಶೆಣಿೈ ಹಾಗೂ ಅಧ್ಯಕ್ಷರಾದ ಪ್ರೊಫೆಸರ್ ಶಂಕರ್ ಅವರಿಗೆ ನೀಡಿದರು ಇದೇ ಸಂದರ್ಭದಲ್ಲಿ ಇತಿಹಾಸತಜ್ಞ ಶ್ರೀಧರ್ ಭಟ್ ಅವರು ಕೊಂಕಣಿ ತರ್ಜುಮೆಯ ಭಿತ್ತಿಪತ್ರವನ್ನು ವಾಚಿಸಿದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಗೀತಂ ಗಿರೀಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಸಂಧ್ಯಾ ಶೆಣೈ ಪ್ರಾಸ್ತಾವಿಕ ಮಾತನಾಡಿದರು. ಮರವಂತೆ ನಾಗರಾಜ್ ಹೆಬ್ಬಾರ್ ಧನ್ಯವಾದ ನೀಡಿ ಸಂಚಾಲಕ ರವಿರಾಜ್ ಹೆಚ್. ಪಿ ಕಾಯ೯ಕ್ರಮ ನಿರೂಪಿಸಿದರು.