‘ಶ್ರೀರುಗ್ಮಿಣೀಶವಿಜಯ’ ಮಹಾಕಾವ್ಯ ಆಧಾರಿತ ಹರಿಕಥಾ ಕಾರ್ಯಕ್ರಮ

ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಶ್ರೀಕೃಷ್ಣಮಠ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಶ್ರೀ ಹಂಡೆದಾಸ ಪ್ರತಿಷ್ಠಾನ(ರಿ) ಕಾರ್ಕಳ ಇವರ ವತಿಯಿಂದ,ಶ್ರೀವಾದಿರಾಜ ವಿರಚಿತ ‘ಶ್ರೀರುಗ್ಮಿಣೀಶವಿಜಯ’ ಮಹಾಕಾವ್ಯ ಆಧಾರಿತ 19 ದಿನಗಳ ಹರಿಕಥಾ ಕಾರ್ಯಕ್ರಮದಲ್ಲಿ,ವಿದ್ವಾನ್ ಗುರುಪ್ರಸಾದ್,ಕುತ್ತೆತ್ತೂರು ಇವರು ‘ಶ್ರೀರುಗ್ಮಿಣೀಶವಿಜಯ’ ದ ೧ ನೇ ಸರ್ಗ ಪ್ರಸಂಗದ ಹರಿಕಥೆಯನ್ನು ನಡೆಸಿದರು.ಹಾರ್ಮೋನಿಯಂನಲ್ಲಿ ವಿದುಷಿ ಲಲಿತಾ ಶ್ರೀರಾಮ್ ಹಾಗೂ ತಬಲಾದಲ್ಲಿ ಕಾರ್ತಿಕ್ ಇನ್ನಂಜೆ ಸಹಕರಿಸಿದರು.

 
 
 
 
 
 
 
 
 
 
 

Leave a Reply