ಅಂತರಾಷ್ಟ್ರೀಯ ಖ್ಯಾತಿವೆತ್ತ ಬಿ ಕೆ ಶಿವಾನಿ ಇವರಿಂದ ಪ್ರೇರಣಾತ್ಮಕ ಪ್ರವಚನ ಕಾರ್ಯಕ್ರಮ

ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಖ್ಯಾತ ವಾಗ್ಮಿ ಹಾಗೂ ಅಂತರ-ರಾಷ್ಟ್ರೀಯ ಖ್ಯಾತಿವೆತ್ತ ಬಿ ಕೆ ಶಿವಾನಿ ಇವರಿಂದ ಪ್ರೇರಣಾತ್ಮಕ ಪ್ರವಚನ ಕಾರ್ಯಕ್ರಮವನ್ನು ಫೆ.11(ಭಾನುವಾರ) ಸಂಜೆ 6 ರಿಂದ 8 ರವರೆಗೆ ಎಂ ಜೆ ಸಿ ಮೈದಾನ, ಮಣಿಪಾಲದಲ್ಲಿ ಬ್ರಹ್ಮಾಕುಮಾರೀಸ್, ಮಣಿಪಾಲ ಸೇವಾಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದೆ.

“ಅಪಾರ ಸಂತೋಷಕ್ಕಾಗಿ ಪರಮಾತ್ಮನೊಂದಿಗೆ ಮನಸ್ಸನ್ನು ಜೋಡಿಸಿ” ಎಂಬ ವಿಷಯದ ಬಗ್ಗೆ ಬಿಕೆ ಶಿವಾನಿಯವರು ಸರಳ, ಪರಿಣಾಮಕಾರಿ ಹಾಗು ಮಧುರ ನುಡಿಗಳಿಂದ ಪಾಲ್ಗೊಂಡ ಸಭಿಕರ ಮನೋ ಶಕ್ತಿಯನ್ನು ಹೆಚ್ಚಿಸುವರು.

ಸದಾ ಸಂತೋಷವಾಗಿರಲು ಸರಳ ಸೂತ್ರಗಳನ್ನು ಚಮತ್ಕಾರಿಕ ಧಾಟಿಯಲ್ಲಿ ತಿಳಿಸಿ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆಗೆ ಪ್ರೇರಣೆ ನೀಡುವರು. ರಾಜಯೋಗ ಧ್ಯಾನ ಮಾಡುವ ಸುಲಭ ವಿಧಾನವನ್ನು ವಿವರಿಸಿ ತೋರಿಸಿ ಕೊಡುವರು. ಒಂದು ಕೋಟಿಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಬಿಕೆ ಶಿವಾನಿಯವರ ಪ್ರೇರಣಾದಾಯಕ ಸಂದೇಶಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.

ಟಿವಿ ಹಾಗೂ ಮೊಬೈಲ್ ಗಳಲ್ಲಿ ಅವರ ಅದ್ಭುತ, ಮನ ಮುಟ್ಟುವ ಮಾತುಗಳನ್ನು ಕೇಳುತ್ತಿದ್ದ ತಮಗೆ ಸನ್ಮುಖದಲ್ಲಿ ನೋಡಿ ಆಲಿಸುವ ಸುವರ್ಣಾವಕಾಶ ಈಗ ಒದಗಿ ಬಂದಿದೆ ಎಂದು ತಿಳಿಸಲು ನಮಗೆಲ್ಲಾ ತುಂಬಾ ಸಂತೋಷವಾಗುತ್ತಿದೆ. ಶಿವಾನಿಯವರ ದಿವ್ಯ ಉಪಸ್ಥಿತಿಯಲ್ಲಿ ಶಕ್ತಿಭರಿತ ವೈಬ್ಸ್ ಅನುಭವ ಮಾಡುವ ಅಮೋಘವಾದ ಈ ಸುಯೋಗವನ್ನು ಕಳೆದುಕೊಳ್ಳದಿರಿ.

ಬಹು ಜನರ ಅಪೇಕ್ಷಿತವಾದ ಈ ಸ್ಪೂರ್ತಿದಾಯಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಲಾಭಾನ್ವಿತರಾಗಬೇಕೆಂದು ಬ್ರಹ್ಮಾಕುಮಾರೀಸ್ ಮಣಿಪಾಲ ಶಾಖೆಯ ಸಂಚಾಲಕರಾದ ಸೌರಭರವರು ವಿನಂತಿಸಿದ್ದಾರೆ.

ಪ್ರವೇಶ ಉಚಿತವಾಗಿದ್ದು ನೋಂದಣಿ ಕಡ್ಡಾಯವಾಗಿದೆ. ನೋಂದಾಯಿಸಿದವರೆಲ್ಲರಿಗೂ ಪ್ರವೇಶ ಪಾಸ್ ವಾಟ್ಸಾಪ್ ಮೂಲಕ ಲಭ್ಯವಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರೆಲ್ಲರೂ ನೋಂದಾಯಿಸಬೇಕಾಗಿದೆ. ಇದರಿಂದ ಎಂಜೆಸಿ ಮೈದಾನದಲ್ಲಿ ಸಮರ್ಪಕವಾದ ಆಸನ ವ್ಯವಸ್ಥೆಯನ್ನು ಮಾಡಲು ಅನುಕೂಲವಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ನೋಂದಾಯಿಸಲು ಈ ಲಿಂಕನ್ನು ಒತ್ತಿ.

https://omshanti.in/BKShivaniPgm-RegForm

ಬಿಕೆ ಶಿವಾನಿಯವರು ಹಿಂದಿ ಮಿಶ್ರಿತ ಇಂಗ್ಲಿಷ್ ಭಾಷೆಯಲ್ಲಿ ಪ್ರವಚನ ನಡೆಸಿ ಕೊಡುತ್ತಾರೆ. ಕೊನೆ ಗಳಿಗೆಯಲ್ಲಾಗುವ ವಿಪರೀತ ಜನಸಂದಣಿಯನ್ನು ತಪ್ಪಿಸಲು ಮುಂಚಿತವಾಗಿಯೇ ಸಂಜೆ 5.15 ಗಂಟೆಗೆ ಬಂದು ಆಸೀನರಾಗಬೇಕೆಂದು ಕೋರಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 9406501161, 9986211034

 
 
 
 
 
 
 
 
 
 
 

Leave a Reply