77ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ರುಡ್ ಸೆಟ್ ಸಂಸ್ಥೆಯಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿ ಗಳ ಸಹಭಾಗಿತ್ವ ದೊಂದಿಗೆ ಆಚರಿಸಲಾಯಿತು.
ಧ್ವಜಾರೋಹಣ ವನ್ನು ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ನೇರವೇರಿಸಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ಹಾಗೂ ಸ್ವಾತಂತ್ರ್ಯ ನಂತರ ದೇಶದಲ್ಲಾದ ಬದಲಾವಣೆ ಗಳ ಬಗ್ಗೆ ಬೆಳಕು ಚೆಲ್ಲಿದರು.
ಕಾರ್ಯಕ್ರಮ ದಲ್ಲಿ ಇದ್ದ ರುಡ್ ಸೆಟ್ ಆಸರೆ ಸಂಘಟನೆ ರಿ, ಬ್ರಹ್ಮಾವರದ ಅಧ್ಯಕ್ಷರಾದ ಶ್ರೀಮತಿ ಹರಿಣಿ ಮಾತನಾಡಿ ಶುಭಹಾರೈಸಿದರು.
ಸಂಸ್ಥೆಯ ಉಪನ್ಯಾಸಕರಾದ ಸಂತೋಷ ಶೆಟ್ಟಿ, ಕಚೇರಿ ಸಹಾಯಕರಾದ ಶ್ರೀನಿವಾಸಯ್ಯ, ರವಿ ಸಾಲ್ಯಾನ್, ವಿನಾಯಕ, ರುಡ್ ಸೆಟ್ ಆಸರೆ ಸಂಘಟನೆಯ ಗೌರವ ಅಧ್ಯಕ್ಷರಾದ ರಾಜೇಶ್ ದೇವಾಡಿಗ, ಕಾರ್ಯದರ್ಶಿ ಯಾದ ಸೂರಜ್ ಶೆಟ್ಟಿ, ಕೋಶಾಧಿಕಾರಿ ಯಾದ ವೆಂಕಟೇಶ ನಾಯ್ಕೆ, ಉಪಾಧ್ಯಕ್ಷರಾದ ಬಿ.ಕುಶ, ಮಾಜಿ ಅಧ್ಯಕ್ಷರಾದ ಶ್ರೀಮತಿ ಕಿಶ್ವರಿ , ಶ್ರೀ ಉಮೇಶ್ ನಾಯರಿ, ಶ್ರೀಮತಿ ರಾಜಲಕ್ಷ್ಮಿ, ಶ್ರೀಮತಿ ಮನೋರಮಾ, ಶ್ರೀ ಪ್ರಶಾಂತ ಕಟಪಾಡಿ, ಶ್ರೀ ಪ್ರವೀಣ್ ಮಲ್ಪೆ, ಕುಮಾರಿ ರಾಗಿಣಿ, ಕುಮಾರಿ ಅನುರೂಪ , ಶ್ರೀಮತಿ ಸೌಮ್ಯ ಕರುಣಾಕರ್ ಜೈನ್ ಭಾಗವಹಿಸಿದ್ದರು.