ನಿವೃತ್ತ ಹಿರಿಯ ಶಿಕ್ಷಕ ಎ.ರಾಘವೇಂದ್ರ ಉಪಾಧ್ಯಾರಿಗೆ ಸನ್ಮಾನ

ಉಡುಪಿ : ಇಂದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್( ರಿ ) ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಹಿರಿಯ ಶಿಕ್ಷಕ ಎ.ರಾಘವೇಂದ್ರ ಉಪಾಧ್ಯಾರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಪರಿಷತ್ ಅಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿ ದ ಬಳಿಕ ಹಿರಿಯ ಸದಸ್ಯರು ಸೇರಿಕೊಂಡು ಸನ್ಮಾನಿಸಿದರು. ಸನ್ಮಾನಿತರು ಅನುಭವ ಹಾಗೂ ಮನದಾಳದ ಮಾತು ಹಂಚಿಕೊಂಡ ಬಳಿಕ ಸಂಸ್ಥೆಗೆ ಶುಭ ಕೋರಿದರು.

ಪ್ರವೀಣ್ ಉಪಾಧ್ಯ,ಚಂದ್ರಕಾಂತ್ ಕೆ ಎನ್, ಮಂಜುನಾಥ್ ರಾವ್,ರಘುಪತಿ ರಾವ್,ಪ್ರಕಾಶ್ ಹೆಬ್ಬಾರ್,ಮುರಳಿ ಅಡಿಗ,ರಂಗನಾಥ್ ಸರಳಾಯ,ರಮೇಶ್ ತೀರ್ಥಹಳ್ಳಿ, ರವಿರಾಜ್, ರವಿ ಬಲ್ಲಾಳ್, ದಿವ್ಯ ವಿ ಪ್ರಸಾದ್, ರಾಧಿಕಾ ಚಂದ್ರಕಾಂತ್, ರಾಜೇಶ್ವರಿ ಪ್ರವೀಣ್, ಆಶಾ ಹೆಬ್ಬಾರ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply