ರೋಟರಿ ಮಣಿಪಾಲ: ವನಮಹೋತ್ಸವ ಕಾರ್ಯಕ್ರಮ

ಮಣಿಪಾಲ : ರೋಟರಿ ಕ್ಲಬ್ ಮಣಿಪಾಲ ಮತ್ತು ಸುವರ್ಣ ಎಂಟರ್ ಪ್ರೈಸಸ್ ಬ್ರಹ್ಮಾವರದ ಆಶ್ರಯದಲ್ಲಿ ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನ ವಠಾರದಲ್ಲಿ ಹಣ್ಣು ಮತ್ತು ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಇಂದು ನಡೆಯಿತು.

ರೋಟರಿ ಅಧ್ಯಕ್ಷ ಮತ್ತು ಖ್ಯಾತ ಮನೋರೋಗ ತಜ್ಞ ಡಾ. ವಿರೂಪಾಕ್ಷ ದೇವರಮನೆ ಚಾಲನೆ ನೀಡಿ ಶುಭ ಹಾರೈಸಿದರು.

ಡಾ. ರಾಮಚಂದ್ರ ಕಾಮತ್, ದೇವಳದ ಪ್ರಮುಖ ಶ್ರೀನಿವಾಸ ಪೂಜಾರಿ, ಗಿಡಗಳ ಪ್ರಾಯೋಜಕ ಮಧುಸೂಧನ್ ಹೇರೂರು,ರೋಟರಿ ಸದಸ್ಯರಾದ ಕರುಣಾಕರ ಶೆಟ್ಟಿ, ದೀಪಕ್ ಪ್ರಭು, ರಾಜವರ್ಮ ಅರಿಗ, ರವಿರಾಜ್ ಹೆಚ್.ಪಿ, ರೊನಾಲ್ಡ್, ರಾಘವೇಂದ್ರ ಕವರ್ವಾಲು,ಸುರೇಶ್ ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply