ಬ್ರಹ್ಮಾವರ ಸಸ್ಯ ಮೇಳ ಮತ್ತು ಆಹಾರೋತ್ಸವ.

ಅಂತರಾಷ್ಟ್ರೀಯ ಸಂಸ್ಥೆ ರೋಟರಿ ರಾಯಲ್ ಬ್ರಹ್ಮಾವರ, ಕೃಷಿ ಕೇಂದ್ರ ಬ್ರಹ್ಮಾವರ, ತೋಟಗಾರಿಕೆ ಇಲಾಖೆ, ಇಂಟ ರಾಕ್ಟ್ ಕ್ಲಬ್ ನಿರ್ಮಲ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಅಗಸ್ಟ್ ತಿಂಗಳ 12 ಮತ್ತು 13ರಂದು ನಿರ್ಮಲ ಪ್ರೌಢ ಶಾಲೆ ಅವರಣದಲ್ಲಿ ಬೃಹತ್ ಸಸ್ಯ ಮೇಳ ಮತ್ತು ಆಹಾರೋತ್ಸವ ನಡೆಯಲಿದೆ.

ಹಸಿರು, ಉಸಿರು, ಶುದ್ಧ ಪರಿಸರ ಕೃಷಿ ಕ್ರಾಂತಿ ಎಂಬ ಧೋರಣೆ ಬರೀ ಭಾಷಣಕ್ಕೆ ಸೀಮಿತವಾಗಿರದೆ ಜನರ ನಡುವೆ ಪ್ರಾಮಾಣಿಕವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡು ರೈತರ ವಿದ್ಯಾವಂತರ, ವಿದ್ಯಾರ್ಥಿಗಳ, ಮತ್ತು ಜನ ಸಾಮಾನ್ಯರನ್ನು ಕೃಷಿ ಮತ್ತು ಸಸ್ಯಕಾಂತಿಯ ಬಗ್ಗೆ ವಿಶೇಷ ಅರಿವು ಮೂಡಿಸುವ ಒಂದು ಪ್ರಯತ್ನ ಇದಾಗಿದೆ.

ಈ ಬೃಹತ್ ಮೇಳದಲ್ಲಿ ರಾಜಾದ್ಯಂತದಿಂದ ಬರುವ ನೂರಾರು ಸಸ್ಯ ಮತ್ತು ಆಹಾರ ಉತ್ಪನ್ನ ಮಳಿಗೆಗಳು ವಿಶೇಷ ಆಕರ್ಷಣೆ ಆಗಿರುತ್ತದೆ. ಶನಿವಾರ ಪೂರ್ವಾಹ್ನ 9.30 ಕ್ಕೆ ಉದ್ಘಾಟನೆಗೊಂಡು ಸಂಜೆ ಆರು ಗಂಟೆ ತನಕ ಮತ್ತು ಮರುದಿನ ಭಾನುವಾರವು ಪ್ರದರ್ಶನ ನಡೆಯಲಿದೆ.

ಸಾರ್ವಜನಿಕರಿಗೆ ಮುಕ್ತ ಪುವೇಶವಿರುವ ಈ ಕಾರ್ಯಕ್ರಮದಲ್ಲಿ ರೈತರು ಮತ್ತು ಅಸಕ್ತರಿಗೆ ಬ್ರಹ್ಮಾವರ ಕೃಷಿ ವಿಜ್ಞಾನಿ ಕೇಂದ್ರ ಮತ್ತು ತೋಟಗಾರಿಕಾ ಇಲಾಖೆಯ ವಿಶೇಷ ತಜ್ಞರಿಂದ ಮಾಹಿತಿ ವಿಚಾರಗೋಶ್ಟಿ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯದೇ ಕಾಗಿ ವಿನಂತಿಸಲಾಗಿದೆ.

ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ರಾಯಲ್ ಬ್ರಹ್ಮಾವರದ ಅಧ್ಯಕ್ಷ ಅಭಿರಾಮ್‌ ನಾಯಕ್‌, ಮಾಜಿ ರೋಟರಿ ಜಿಲ್ಲಾ ಗವರ್ನರ್ ಜ್ಞಾನ ವಸಂತ ಶೆಟ್ಟಿ ಕಾರ್ಯದರ್ಶಿ ವಿಜಯೇಂದ್ರ ಶೆಟ್ಟಿ ಸಂಯೋಜಕರಾದ ವಕೀಲ ಅಶೋಕ್ ಕುಮಾರ್ ಶೆಟ್ಟಿ, ಬಿ.ಎಸ್. ಭಟ್, ಜೈ ಕಿಶನ್, ಉದಯ್‌ ಕುಮಾರ್ ಶೆಟ್ಟಿ, ರಾಜಾರಾಮ ಶೆಟ್ಟಿ, ವಿಶ್ವನಾಥ ಶೆಟ್ಟಿ, ತಿ ಬಿ.ಎಸ್.ರಾಮ್ ಶೆಟ್ಟಿ ಮತ್ತು ಶ್ರೀಕಾಂತ್ ಸಾಮಂತ್ ಹಾಗೂ ಬ್ರಹ್ಮಾವರ ಕೃಷಿ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ತ ಡಾ ಧನಂಜಯ ಬಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply