ಉಡುಪಿಃ ದ್ವೈತ ಸಿದ್ಧಾಂತದ ಮೇರು ವಿದ್ವಾಂಸ , ರಾಷ್ಟ್ರಪ್ರಶಸ್ತಿ ಪುರಸ್ಕೃತ, ಉಡುಪಿ ಶ್ರೀಕೃಷ್ಣಮಠದ ಆಸ್ಥಾನ ವಿದ್ವಾಂಸರಾಗಿದ್ದ ಪ್ರೊ ಕೆ ಹರಿದಾಸ ಉಪಾಧ್ಯಾಯ(94) ಬುಧವಾರ ರಾತ್ರಿ ನಿಧನರಾದರು.
ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರಿದ್ದಾರೆ.
ವಿದ್ವಾನ್ ಹರಿದಾಸ ಉಪಾಧ್ಯಾಯರ ನಿಧನಕ್ಕೆ ,ಅವರಲ್ಲಿ ವೇದಾಂತ ಶಾಸ್ತ್ರಾಧ್ಯಯನಗೈದ ವಿದ್ಯಾರ್ಥಿಯೂ ಆಗಿರುವ ಶ್ರೀ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ .
ಉಡುಪಿಯ ಶ್ರೀ ಮನ್ನಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾವಿದ್ಯಾಲ ಯದ ಪ್ರಾಚಾರ್ಯರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಹಾಗೂ ಅಪೂರ್ವ ವಿದ್ವಾಂಸರಾಗಿದ್ದ ಶ್ರೀಯುತ ಉಪಾಧ್ಯಾ ಯರ ನಿಧನದ ವಾರ್ತೆ ತಿಳಿದು ತೀವ್ರ ವಿಷಾದವಾಗಿದೆ .
ಅವರ ಆತ್ಮಕ್ಕೆ ಶ್ರೀ ಕೃಷ್ಣ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ .