ಖೈದಿಗಳ ನಡುವೆ ಮಾರಾಮಾರಿ : ಮಂಗಳೂರು ಕಾರಾಗೃಹದಲ್ಲಿ​ ​ಇಬ್ಬರು ಖೈದಿಗಳು ಗಂಭೀರ

ಮಂಗಳೂರು : ದರೋಡೆ ಪ್ರಕರಣದಲ್ಲಿ  ಬಂಧಿತನಾಗಿದ್ದ ಆರೋಪಿಯೋರ್ವ ಖೈದಿಗಳ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಖೈದಿಗಳು ಗಾಯಗೊಂಡಿರುವ ಘಟನೆ ಮಂಗಳೂರಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
 ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಮೀರ್ ಹಾಗೂ ಅನ್ಸಾರ್ ಎಂಬವರು ಹಲ್ಲೆ ಮಾಡಿ ಕೊಂಡಿದ್ದಾರೆ. ಜೈಲಿನಲ್ಲಿದ್ದ ಚಮ​ಚ  ಹಾಗೂ ಅಡುಗೆ ಸಾಮಗ್ರಿಗಳನ್ನು ಬಳಸಿ ಹಲ್ಲೆ ನಡೆ​ಸಿದ್ದರೆ ಎನ್ನಲಾಗಿದೆ.  ​
ಘಟನೆಯಲ್ಲಿ ಮೂಲ್ಕಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಅನ್ಸಾರ್ ಹಾಗೂ ಮೂಡಬಿದರೆ ದರೋಡೆ ಪ್ರಕರಣ ದಲ್ಲಿ ಬಂಧಿತನಾಗಿದ್ದ ಜೈನುದ್ದೀನ್ ಎಂಬವರು ಗಾಯ​ ​ಗೊಂಡಿದ್ದಾರೆ.
ಗಾಯಗಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ‌‌. ಈ ಕುರಿತು ಜೈಲು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
 
 
 
 
 
 
 
 
 
 
 

Leave a Reply