ವಿವಿಧ ಗ್ರಾಮ ಪಂಚಾಯತ್ ಗಳ ಪೌರ ಕಾರ್ಮಿಕರಿಗೆ ಅಭಿನಂದನೆ

ಮೋದಿ ಬ್ರಿಗೇಡ್, ಕಟಪಾಡಿ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್, ಉಡುಪಿ ಇವರ ಜಂಟಿ ಯೋಜನೆಯಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಕಾಪು ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ ಪೌರ ಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ ಕಟಪಾಡಿ ಅರವೀಪುರಂ ಮಠದಲ್ಲಿ ಜರಗಿತು.ಕಾಪು ತಾಲೂಕಿನ 16 ಗ್ರಾಮ ಪಂಚಾಯತ್ ಗಳ 24 ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ನೆರವೇರಿಸಿದರು..ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣರವರು ಪೌರ ಕಾರ್ಮಿಕರ ಕೆಲಸ ಕಾರ್ಯಗಳ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದರು. ಮಲಬಾರ್ ಗೋಲ್ಡಿನ ಶಾಖಾ ಮುಖ್ಯಸ್ಥರಾದ ಹಫೀಜ್ ರೆಹಮಾನ್ ಅವರು ನಮ್ಮ ಸಂಸ್ಥೆಯು ಹಲವಾರು ಸಾಮಾಜಿಕ ಚಟುವಟಿಕೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದೇವೆ ಎಂದರು.  ರಾಘವೇಂದ್ರ ನಾಯಕ್ ಅಜೆಕಾರ್ ಇವರು ಮಲಬಾರ್  ಚಾರಿಟೇಬಲ್ ಟ್ರಸ್ಟ್ ನಿಂದ ಬಡ ಜನರಿಗೆ ಸಿಗುವ ಯೋಜನೆಗಳನ್ನು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಲೇಖಕಿ ಅಮಿತಾಂಜಲಿ,  ಕೆ ಕುಮಾರ್ ಮತ್ತು ವಾಸುದೇವ ರಾವ್, ಮಟ್ಟು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಮೋದಿ ಬ್ರಿಗೇಡ್ ಸಂಚಾಲಕ ಗುರುಕೃಪಾ ರಾವ್, ಸಹ ಸಂಚಾಲಕಿ ನೀತಾ ಪ್ರಭು, ವಿನಾಯಕ್ ಜಿ ನಾಯಕ್, ನಿತಿನ್ ಶೇರಿಗಾರ್, ಯೋಗಿಶ್ ಮಟ್ಟು, ಸೋನು ಪಾಂಗಾಳ, ಶೇಖ್ ಆಸಿಫ಼್, ಮಹಮ್ಮದ್ ಆಲಿ ಸರ್ಕಾರಿಗುಡ್ಡೆ, ಸರೋಜಿನಿ ಶೆಟ್ಟಿ, ಶ್ರೀನಿವಾಸ್ ಕಿಣಿ ಮತ್ತು ಕರುಣಾಕರ್ ಪೂಜಾರಿ, ಗೀತಾ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ಕು| ಕಾವ್ಯ ಶೆಣೈ ಕಾರ್ಯಕ್ರಮ ನಿರೂಪಿಸಿ ಕೆ. ಮುರಳೀಧರ್ ಪೈ ಸ್ವಾಗತಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply