ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಂಘದಿಂದ ಕೋವಿಡ್ ಛಾಯಚಿತ್ರ ಪ್ರರ್ದಶನ

ಬೆಂಗಳೂರು : ಈ ವರ್ಷದ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಕೊರೊನಾ ಸೋಂಕು ಜನರನ್ನು ಹೇಗೆಲ್ಲಾ ಭಯಪಡಿಸಿತ್ತು. ಲಾಕ್ಡೌನ್ ಆಗಿ ಜನರು ಪಟ್ಟ ಕಷ್ಟಗಳು ಎಂತಹವು ಅಂತ ಅಂದಿನ ಛಾಯಾಚಿತ್ರಗಳಷ್ಟೇ ಹೇಳಬೇಕು.

ಇಡೀ ರಾಜ್ಯದಲ್ಲಿ ಅದೇಷ್ಟೋ ಜನರು ಅನ್ನ, ನೀರಿಲ್ಲದೆ ಕಷ್ಟಪಟ್ಟಿದ್ದು, ಅಗತ್ಯ ವಸ್ತುಗಳು ಸಿಗದೆ ಸಾಮಾನ್ಯರು ಕಂಗೆಟ್ಟಿದ್ದು, ವಲಸಿಗರು ತಮ್ಮೂರಿಗೆ ತೆರಳಲು ಬವಣೆ ಪಟ್ಟಿದ್ದರು.

ಈ ಎಲ್ಲುವುದನ್ನು ರಾಜ್ಯದೆಲ್ಲೆಡೆಯ ಛಾಯಾಗ್ರಾಹಕರು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಹಿಡಿದಿಟ್ಟಿದ್ದು, ಆ ಚಿತ್ರಗಳೇ ಅಂದಿನ ದುಸ್ಥಿತಿಯನ್ನು ಕಟ್ಟಿಕೊಡುತ್ತವೆ.

ಅಂತಹ ಚಿತ್ರಗಳ ಪ್ರದರ್ಶನದ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಂಘ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಕೋವಿಡ್ 19 ರಾಜ್ಯ ಮಟ್ಟದ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ. ಬಹಳಷ್ಟು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಛಾಯಾಚಿತ್ರ ಪ್ರದರ್ಶನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದು, ನ.27ರಿಂದ 29ರ ವರೆಗೆ ಪ್ರದರ್ಶನ ಇರಲಿದೆ.

 
 
 
 
 
 
 
 
 
 
 

Leave a Reply