ನವೆಂಬರ್ 30ರಂದು ಪರ್ಯಾಯ ಕೃಷ್ಣಾಪುರ ಮಠದ ಪ್ರಥಮ ಮುಹೂರ್ತ

ಉಡುಪಿ: ಕೃಷ್ಣಾಪುರ ಮಠದಲ್ಲಿ ನವಂಬರ್ 30ರಂದು ಬೆಳಗ್ಗೆ 8:32ರ ಧನು ಲಗ್ನ ಮುಹೂರ್ತದಲ್ಲಿ ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ ನಡೆಯಲಿದೆ. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ 2022 ಜನವರಿ 18ರಂದು 4ನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ.
 ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಹಾಗೂ ಧಾನ್ಯ ಮುಹೂರ್ತ ನಡೆಯುವುದು ಕೃಷ್ಣ ಮಠದ ಸಂಪ್ರದಾಯ. ಹೀಗಾಗಿ ಪರ್ಯಾಯಕ್ಕೆ ಒಂದು ವರ್ಷ ಮುನ್ನವೇ ಮೊದಲ ಬಾಳೆ ಮುಹೂರ್ತ ನೆರವೇರಲಿದೆ.
 
 
 
 
 
 
 
 
 
 
 

Leave a Reply