ಕೋಟ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೋಟ: ಪಂಚವರ್ಣ ಸಂಸ್ಥೆ ನಾನಾ ಸಮಾಜಮುಖಿ ವರ್ಣಮಯ
ಕಾರ್ಯಕ್ರಮಗಳಿಂದ ಜನಮನ್ನಣೆಗಳಿಸಿದೆ ಎಂದು ಕುoದಾಪುರದ ಉಪ ವಿಭಾಗಾಧಿಕಾರಿ
ರಶ್ಮಿ ಎಸ್ ಆರ್ ಹೇಳಿದರು.
ಶುಕ್ರವಾರ ಹಂಗಾರಕಟ್ಟೆ ಬಾಳಕುದ್ರು ಶ್ರೀ ಮಠದಲ್ಲಿ ಕೋಟದ ಪಂಚವರ್ಣ ಯುವಕ
ಮಂಡಲ ಹಾಗೂ ಅಧೀನ ಸಂಸ್ಥೆ ಪoಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ನ.೧೦ರಂದು ಕೋಟ ಗಾಂಧಿ ಮೈದಾನದಲ್ಲಿ ನಡೆಯುವ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ನಿರಂತರ ಸಾಮಾಜಿಕ ಕಾರ್ಯಗಳು ಅದರಲ್ಲೂ ಅವರ ಸ್ವಚ್ಛತಾ ಪರಿಸರಸ್ನೇಹಿ ಕಾರ್ಯಕ್ರಮಗಳು ಅದರ ಯಶಸ್ಸಿನ ಭಾಗವಾಗಿದೆ.ಇವರ
ಕಾರ್ಯಭಾಹುಳ್ಯ ಎಲ್ಲಾ ಕ್ಷೇತ್ರಗಳಲ್ಲಿ ಪಸರಿಸಿಕೊಂಡಿದೆ,ಅನ್ನದಾನ ಆರೋಗ್ಯ ಶೈಕ್ಷಣಿಕ
ಕಾರ್ಯಗಳಿಗೆ ಹೆಚ್ಚಿನ ಆಯಾಮ ನೀಡಿದಂತೆ ಸಮಾಜದ ಕುಂದುಕೊರತೆಗಳ ಬಗ್ಗೆ
ಸ್ಪಂದಿಸುವ ಈ ಸಂಸ್ಥೆ ಬಹು ಎತ್ತರಕ್ಕೆ ಬೆಳೆಯಲಿ ಇನ್ನಷ್ಟು ಸೇವಾ ಕಾರ್ಯ ಜನಸಾಮಾನ್ಯರಿಗೆ ದಕ್ಕಲಿ ಎಂದು ಹಾರೈಸಿದರು.
ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಮಾತನಾಡಿ ಪಂಚವರ್ಣ ಸಂಸ್ಥೆ ನಿರಂತ ೨೬ ಸಂವತ್ಸರಗಳಿoದ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿ
ಜನಮೆಚ್ಚುಗೆ ಗಳಿಸಿದೆ.ಪರೋಪಕಾರಕ್ಕಾ ಪರಿಸರದಲ್ಲಿ ನದಿ,ಮರಗಿಡಗಳು ಪಕ್ಷಿ ಸಂಕುಲಗಳು ಜೀವಿಸುತ್ತದೆ ಅದರಂತೆ ಒಂದು ಸಂಸ್ಥೆಯಾಗಿ ಮಾಡಬೇಕಾದ ನೈಜ
ಕಾರ್ಯಕ್ರಮಗಳನ್ನು ಪಂಚವರ್ಣ ಸಂಸ್ಥೆ ನೀಡುತ್ತಿದೆ.ಸಮಾಜದ ಋಣ ತಿರಿಸಲು ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಗಳನ್ನು ಮಾಡುತ್ತಿದ್ದಾರೆ.ಇದೊಂದು ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಶುಭಾಶ್ರೀವಾದ ನೀಡಿದರು. ಇದೇ ವೇಳೆ ಗಣ್ಯರ ಸಮ್ಮುಖದಲ್ಲಿ
ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನದ ಆಮಂತ್ರಣ ಪತ್ರಿಕೆಯನ್ನು
ಬಿಡುಗಡೆಗೊಳಿಸಲಾಯಿತು.
ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ
ಸತೀಶ್ ಕುಂದರ್, ಪಾಂಡೇಶ್ವರ ಕಳಿಬೈಲು ಶ್ರೀ ಕ್ಷೇತ್ರದ ಮುಕ್ತೇಸರ ಎಂ.ಸಿ ಚಂದ್ರಶೇಖರ,
ಗೋಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಸರಸ್ವತಿ ಜಿ ಪುತ್ರನ್, ಸಾಮಾಜಿಕ ಚಿಂತಕ ಗಣೇಶ್
ಪುತ್ರನ್,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪಂಚವರ್ಣ ಸಂಸ್ಥೆಯ
ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್,ಹಂದಟ್ಟು ಮಹಿಳಾ ಬಳಗದ ಶಕೀಲ ಎನ್ ಪೂಜಾರಿ , ಶ್ರೀ ಮಠದ ಚಂದ್ರ ಭಟ್,ಮಂಜುನಾಥ ಭಟ್,ಮತ್ತಿತರರು ಉಪಸ್ಥಿತರಿದ್ದರು. ಪoಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ
ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಇದೇ ಬರುನ ನ.೧೦ರಂದು ಕೋಟದ
ಗಾಂಧೀ ಮೈದಾನದಲ್ಲಿ ಚಿತ್ರನಟ ದೊಡ್ಡಣ್ಣ ಇವರಿಗೆ ಪಂಚವರ್ಣ
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಹಂಗಾರಕಟ್ಟೆ ಬಾಳಕುದ್ರು
ಶ್ರೀ ಮಠದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ನ.೧೦ರಂದು ಕೋಟ ಗಾಂಧಿ
ಮೈದಾನದಲ್ಲಿ ನಡೆಯುವ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ
ಆಮಂತ್ರಣ ಪತ್ರಿಕೆಯನ್ನುಕುಂದಾಪುರದ ಉಪ ವಿಭಾಗಾಧಿಕಾರಿ ರಶ್ಮಿ ಎಸ್ ಆರ್
ಬಿಡುಗಡೆಗೊಳಿಸಿದರು
 
 
 
 
 
 
 
 
 
 
 

Leave a Reply