ಮನಃ ಶಾಂತಿಯಿಂದ‌ ವಿಶ್ವಶಾಂತಿ ಆನ್ಲೈನ್ ಕಾರ್ಯಕ್ರಮ

ಉಡುಪಿ : ರೋಟರಿ ಕ್ಲಬ್ ಮಣಿಪಾಲ , ರೋಟರಿ ಕ್ಲಬ್ ಶಿವಮೊಗ್ಗ ನಾರ್ತ್ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ರ ಝೋ ನ್ 4 ಮತ್ತು ಝೋನ್ 10 ಇವುಗಳ ಆಶ್ರಯದಲ್ಲಿ ಮನಃ ಶಾಂತಿಯಿಂದ‌ ವಿಶ್ವಶಾಂತಿ ಎನ್ನುವ ಕಾರ್ಯಕ್ರಮ ಅ.2 ರಂದು ನಡೆಸಲಾಯಿತು. 

ಜಿಲ್ಲೆಯ ಗೌವರ್ನರ್ ರೋ.ರಾಮಚಂದ್ರ ಮೂರ್ತಿ ಮತ್ತು ನಿಯೋಜಿತ ಜಿಲ್ಲಾ ಗೌವರ್ನರ್ ಡಾ.ಗೌರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಡಾ.ವಿರೂಪಾಕ್ಷ ದೇವರಮನೆ, ಉತ್ತಮ ಪೇರೇಟಿಂಗ್ ನಿಂದ‌ ಶಿಸ್ತು ಬದ್ದ ಬಾಲ್ಯವನ್ನು ನೀಡಿದಾಗ ಮನೆ ಮನೆಗಳಲ್ಲಿ ಶಾಂತಿ‌ನೆಲೆಸಿ ಅದು ವಿಶ್ವಶಾಂತಿಗೆ ಮೂಲವಾಗುತ್ತದೆ ಎಂದು‌‌ ವಿವಿಧ ಉದಾಹರಣೆಗೆ ಮೂಲಕ‌ ತಮ್ಮ‌ ಉಪನ್ಯಾಸದಲ್ಲಿ‌ ತಿಳಿಸಿದರು.

ಡಾ. ಶುಭಾ ಹೆಚ್ ಎಸ್ ಕಾರ್ಯಕ್ರಮ ನಿರೂಪಿಸಿ, ರೋ.‌ಮಲ್ಲೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚಿನ ಜನರು‌ ಭಾಗವಹಿಸಿದರು. 

 
 
 
 
 
 
 
 
 
 
 

Leave a Reply