ಲಯನ್ಸ್ ಕ್ಲಬ್ ಬ್ರಹ್ಮಗಿರಿಯಿಂದ ಲಯನ್ ಹರಿಪ್ರಸಾದ್ ರೈ “ಲಯನ್ ಆಫ್ ದ ಇಯರ್” ಘೋಷಣೆ

ಲಯನ್ಸ್ ಕ್ಲಬ್ ಬ್ರಹ್ಮಗಿರಿಗೆ ಪ್ರಾಂತಾಧ್ಯಕ್ಷರ ಭೇಟಿ ಕಾರ್ಯಕ್ರಮವು ಉದ್ಯಾವರ ಬಲಾಯಿಪಾದಿ, ನಿತ್ಯಾನಂದ ಆರ್ಕೆಡಲ್ಲಿ ನಡೆಯಿತು. ಫೆಬ್ರವರಿ ತಿಂಗಳು ಮಾಜಿ ಜಿಲ್ಲಾ ಗವರ್ನರಗಳ ಮಾಸಿಕವಾದುದರಿಂದ ಆರು ಮಂದಿ ಮಾಜಿ ಜಿಲ್ಲಾ ಗವರ್ನರ್ ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷರಾದ ಲಯನ್ ಹರಿಪ್ರಸಾದ್ ರೈ “ಲಯನ್ ಆಫ್ ದ ಇಯರ್” ಎಂದು ಕ್ಲಬ್ಬಿನ ಅಧ್ಯಕ್ಷರಾದ ಲಯನ್|ಉಮೇಶ್ ನಾಯಕ್ ಘೋಷಿಸಿ, ಪ್ರಾಂತೀಯ ಅಧ್ಯಕ್ಷರ ಜೊತೆಯಲ್ಲಿ ಪ್ರಾಂತೀಯ ಪ್ರಥಮ ಮಹಿಳೆ ಲಯನ್ ವಿಜೇತ ರೈ, ಅವರನ್ನು ಸನ್ಮಾನಿಸಲಾಯಿತು.ಕ್ಲಬ್ ನ ಅಧ್ಯಕ್ಷರಾದ ಲಯನ್ ಉಮೇಶ್ ನಾಯಕ್, ಕಾರ್ಯದರ್ಶಿ ಲಯನ್ ಗೀತಾ.ವಿ.ರಾವ್, ಪ್ರಾಂತೀಯ ಕಾರ್ಯದರ್ಶಿ ಲಯನ್ ಗಿರೀಶ್ ರಾವ್, ಲಿಯೋ ಕಾರ್ಯದರ್ಶಿ ಶ್ರೇಯನ್ ಶೇಟ್, ವಲಯ ಅಧ್ಯಕ್ಷ ರಾದ ಲಯನ್ ಜಯಾನಂದ ಕೊಡವೂರು, ಮತ್ತು ಮಾಜಿ ಜಿಲ್ಲಾ ಗವರ್ನರ್ ಗಳಾದ ಲಯನ್ ಜಯಕರ್ ಶೆಟ್ಟಿ ಇಂದ್ರಾಳಿ, ಲಯನ್ ಸುರೇಶ್ ಶೆಟ್ಟಿ, ಲಯನ್ ಮಧುಸೂದನ್ ಹೆಗಡೆ, ಲಯನ್ ವಿ.ಜಿ.ಶೆಟ್ಟಿ, ಲಯನ್ ಎನ್ .ಎಮ್.ಹೆಗಡೆ, ಲಯನ್ ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.ಲಯನ್ ಇಂದಿರಾ ಸುಬ್ಬಯ್ಯ ಹೆಗಡೆ ಯವರು ಕಾರ್ಯಕ್ರಮವನ್ನು ನಿರೂಪಿಸಿದರೆ, ಲಯನ್ ಉಮೇಶ್ ನಾಯಕ್ ಸ್ವಾಗತಿಸಿದರು, ಮತ್ತು ಲಯನ್ ಗೀತಾ ವಿ ರಾವ್ ಇವರು ವಂದಿಸಿದರು.

 
 
 
 
 
 
 
 
 
 
 

Leave a Reply