ಲಯನ್ಸ್ ಹಾಗೂ ಲಿಯೋ ಕ್ಲಬ್ ಉಡುಪಿ ಸೌತ್ ನ ನೂತನ ಪದಾಧಿಕಾರಿಗಳ ಪದಗ್ರಹಣ

ಉಡುಪಿ : ಲಯನ್ಸ್ ಹಾಗೂ ಲಿಯೋ ಕ್ಲಬ್ ಉಡುಪಿ ಸೌತ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಉಡುಪಿ ಟೌನ್ ಹಾಲ್ ಸಭಾಂಗಣದಲ್ಲಿ ಜರುಗಿತು.

ಪ್ರತಿಜ್ಞಾ ವಿಧಿ ಕಾರ್ಯವನ್ನು ನಡೆಸಿದ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಲಯನ್ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯು ತನ್ನ ಸೇವಾ ಕಾರ್ಯದಿಂದ ಸಾವಿರಾರು ಅರ್ಹ ಫಲಾನುಭವಿಗಳಿಗೆ ಸಹಾಯ ಮಾಡುತ್ತಿದೆ ಎಂದರು .

ಕ್ಲಬ್ ನ ಈ ಸಾಲಿನ ಅಧ್ಯಕ್ಷರಾಗಿ ದಿನೇಶ್ ಬಂಗೇರ ಕಾರ್ಯದರ್ಶಿಯಾಗಿ ಗೋಪಾಲ ಬಾಯರಿ,
ಲಿಯೋ ಅಧ್ಯಕ್ಷರಾಗಿ ನಿದರ್ಶ್ ಡಿ ಬಂಗೇರ, ಕಾರ್ಯದರ್ಶಿಯಾಗಿ ನಿಹಾಲ್ ಕುಮಾರ್ , ಕೋಶಾಧಿಕಾರಿಯಾಗಿ ಲಿಯೋ ದೀಷ್ಣಾ ತಮ್ಮ ತಂಡದೊಂದಿಗೆ ಪ್ರತಿಜ್ಞೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂತ್ಯಾಧ್ಯಕ್ಷ ಪಾಂಡುರಂಗ ಆಚಾರ್,ವಲಯಾಧ್ಯಕ್ಷ ಪ್ರಸಾದ್ ಶೆಟ್ಟಿ, ಲಯನ್ಸ್ ಗಣ್ಯರಾದ ಸಪ್ನಾ ಸುರೇಶ್, ಜಯಪ್ರಕಾಶ್ ಭಂಡಾರಿ, ಬೆನಗಲ್ ನಾಗಪ್ಪ ಅಮೀನ್, ಶಾಲಿನಿ ಬಂಗೇರ, ವಿಜಯಾ ಬಾಯರಿ, ಮುಂತಾದವರು ಉಪಸ್ಥಿತರಿದ್ದರು.

ನಿಕಟ ಪೂರ್ವ ಅಧ್ಯಕ್ಷೆ ವೀಣಾ ಬಾಯರಿ ಸ್ವಾಗತಿಸಿ, ಕಾರ್ಯದರ್ಶಿ ಗೋಪಾಲ್ ಬಾಯರಿ ವಂದಿಸಿದರು.ಕ್ಲಬ್ ನ ಸ್ಥಾಪಕಾಧ್ಯಕ್ಷ ಪ್ರೋ ವೇಣುಗೋಪಾಲ ಮುಳ್ಳೇರಿಯಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply