ಕೊಡವೂರು ವಾರ್ಡ್ ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಉಡುಪಿ : ಕೊಡವೂರು ವಾರ್ಡ್ ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ನಡೆಸಲಾಯಿತು. ಸಕ್ಷಮ ಜಿಲ್ಲಾಧಿಕಾರಿ ಲತಾ ಭಟ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

 ಮುಖ್ಯ ಅತಿಥಿಯಾಗಿ ಕೆ ವಿನಾಯಕ್ ರಾವ್, ಸೇವಾ ಧಾಮ ಕನ್ಯಾಡಿ ಉಪಸ್ತಿತರಿದ್ದರು.ಕೊಡವೂರು ವಾರ್ಡ್ ನಲ್ಲಿ ದಿವ್ಯಾಂಗ ರಕ್ಷಣಾ ಸಮಿತಿ ರಚನೆ ಮಾಡಿಕೊಂಡು ದುಡಿಯಲು ಸಾಧ್ಯವಿಲ್ಲದ ಅಂಗವಿಕಲರಿಗೆ ಅನೇಕ ಬಡ ಅಂಗವಿಕಲರಿಗೆ ಅಕ್ಕಿ ವಿತರಣೆ,ಮನೆ ಕಟ್ಟಲು ಸಿಮೆಂಟ್, ಕ್ಯಾನ್ಸರ್ ಮತ್ತು ಕಣ್ಣು ಚಿಕಿತ್ಸೆಗೆ ಧನ ಸಹಾಯ, ದಿವ್ಯಾಂಗ ರಿಗೇ ವ್ಹೀಲ್ ಚೇರ್ ಕೊಡುವ ಕಾರ್ಯಕ್ರಮ ಅರ್ಥ ಪೂರ್ಣವಾಗಿ ವಿಶ್ವ ಮಹಿಳಾ ದಿನಾಚರಣೆ ದಿನ ನಡೆಯಿತು.

 ರುಕ್ಮಿಣಿ ಪ್ರಶಾಂತ್ ಬಲ್ಲಾಳ್ ಕೊಡವೂರು ಮಗಳಾದ ಅಂಜಲಿಯ ಹುಟ್ಟುಹಬ್ಬದ ನಿಮಿತ್ತ ಈ ಕಾರ್ಯಕ್ರಮ ನಡೆಸಲಾಯಿತು. ರೂಪಲಕ್ಷ್ಮಿ, ಶ್ರೀನಿಧಿ, ನಾರಾಯಣ್ ಬಲ್ಲಾಳ್, ರಾಯನ್ ಫರ್ನಾಂಡಿಸ್, ಜಯ ಪೂಜಾರಿ ಕಾರ್ತಿಕ್, ವಿನಯ್ ಇನ್ನಿತರರು ಉಪಸ್ಥಿತರಿದ್ದರು.ದಿವ್ಯಾಂಗ ರಕ್ಷಣಾ ಸಮಿತಿ ಅಧ್ಯಕ್ಷ ಹರೀಶ್ ಕೊಪ್ಪಳ್ ತೋಟ ಎಲ್ಲರನ್ನು ಸ್ವಾಗತಿಸಿ, ಅಜಿತ್ ಬನ್ನಂಜೆ ವಂದಿಸಿದರು.

 
 
 
 
 
 
 
 
 
 
 

Leave a Reply