ಕುಂದಾಪುರ ಪರಿಸರದಲ್ಲಿ ಸುಮಾರು 230 ಕ್ಕಿಂತಲೂ ಹೆಚ್ಚು ವೃದ್ದರಿಗೆ, ಕೂಲಿ ಕಾರ್ಮಿಕರಿಗೆ, ಬೇರೆ ಬೇರೆ ಕಚೇರಿಗಳಲ್ಲಿ ಕೆಲಸ ಮಾಡುವರಿಗೆ, ಆಸ್ಪತ್ರೆಯಲ್ಲಿ ಇರುವ ರೋಗಿ ಗಳಿಗೆ ಹಾಗು ಅವರ ಜೊತೆ ಇರುವವರಿಗೆ ಮತ್ತು ಹಸಿದವರಿಗೆ ಊಟವನ್ನು ನಿರಂತರ 46 ದಿನಗಳಿಂದ ಊಟ ನೀಡಲಾಯಿತು.
46 ನೇ ದಿನದ ಅನ್ನದಾಸೋಹದ ಪ್ರಾಯೋಜಕರು ಶ್ರೀಮತಿ ಶಾಲಿನಿ ಅಣ್ಣಯ್ಯ ಹೆಗ್ಡೆ ದುಬೈ.
ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ವಿಜಯ ಭಂಡಾರಿ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್, ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ, ಶ್ರೀಧರ್ ಸುವರ್ಣ, ಮಾಜಿ ಕಾರ್ಯದರ್ಶಿ ಗೌತಮ್ ನಾವಡ ಉಪಸ್ಥಿತರಿದ್ದರು
Amazing job