ಉಡುಪಿ: ಇಂದು ಕೊಡವೂರು ವಾರ್ಡಿನ ಲಕ್ಷ್ಮೀ ನಗರ ಪರಿಸರದಲ್ಲಿ ಶಿವಾಜಿ ಪಾರ್ಕ್ ನಿರ್ವಹಣಾ ಸಮಿತಿ ವತಿಯಿಂದ, ಕೆ ವಿಜಯ್ ಕೊಡವೂರು ಮುಂದಾಳತ್ವದಲ್ಲಿ ಮನೆ ಮನೆಗೆ ತೆರಳಿ ವ್ಯಾಕ್ಸೀನ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಯಿತು.
ಜನರಿಗೆ ವಾಕ್ಸಿನ್ ಕುರಿತು ಇರುವ ತಪ್ಪು ಮಾಹಿತಿಯನ್ನು ಮತ್ತು ಭಯವನ್ನು ದೂರಗೊಳಿಸಲು ಜಾಗೃತಿಯನ್ನು ಮತ್ತು ಧೈರ್ಯ ತುಂಬುವ ಕೆಲಸ ನಡೆಯಿತು.
ಅನೇಕ ಜನರು ವ್ಯಾಕ್ಸಿನ್ ನಲ್ಲಿ ಸೈಡ್ ಎಫೆಕ್ಟ್ಸ್, ಹಾಗೂ ಅನೇಕ ರೀತಿಯ ಗೊಂದಲಗಳಿಗೆ ಗಾಬರಿಯಾಗಿದ್ದರೆ. ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿದ್ದು,ಜನರು ವ್ಯಾಕ್ಸೀನ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಇಂತಹ ತಪ್ಪು ಮಾಹಿತಿಗೆ ಕಿವಿಗೊಡಬಾರದು ಮತ್ತು ಭಯ ಪಡದೆ ಎಲ್ಲರೂ ಲಸಿಕೆ ಪಡೆಯಬೇಕು ಎಂದು ಮನೆ ಮನೆಗೆ ತೆರಳಿ ಸರಿಯಾದ ಮಾಹಿತಿಯನ್ನು ನೀಡಿ ಜನರಿಗೆ ಆನ್ಲೈನ್ ನಲ್ಲಿ ನೋಂದಣಿ ಮಾಡಲಾಯಿತು.