ಉಡುಪಿ :-ಹೋಂ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ಮಣಿಪಾಲ ಕೆ.ಎಂ.ಸಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದವರಿಂದ ಎಂಬುಲೆನ್ಸ್ ನೋoದಾಯಿತ ಚಾಲಕರಿಗೆ ಎಮರ್ಜೆನ್ಸಿ ಮ್ಯಾನೇಜ್ ಮೆಂಟ್ ಟ್ರೇನಿಂಗ ಫಾರ್ ಅವರ್ ಕಾಯ೯ಕ್ರಮ ಜ.8 ಆದಿತ್ಯವಾರ ಕೀಳಂಜೆ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಿತು.
ಈ ಸಂದಭ೯ದಲ್ಲಿ ಪ್ರಾಯೋಗಿಕ ಕಾಯಾ೯ಗಾರದ ಮೂಲಕ ಆಪ್ತ್ಕಾಲದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮನವರಿಕೆ ಮಾಡಲಾಯಿತು.
ಈ ಕಾಯಾ೯ಗಾರದಲ್ಲಿ ಡಾIIಪ್ರತ್ವಿಶ್ರೀ ರವೀಂದ್ರ, ಡಾII ಮಹಮದ್ ಖಾಲೀದ್, ಡಾII ವ್ರಂದಾಲತ್, ಡಾ|| ಯುವರಾಜ್ ಮತ್ತು ತಂಡದವರು’ ಭಾಗವಹಿಸಿದ್ದರು.
ಹೋಂ ಡಾಕ್ಟರ್ ಫೌಂಡೇಶನ್ ಪ್ರಮುಖರಾದ ಡಾII ಶಶಿಕಿರಣ್ ಶೆಟ್ಟಿ, ಡಾII ಸುಮಾ ಶೆಟ್ಟಿ, ರಾಘವೇಂದ್ರ ಪೂಜಾರಿ , ಬಂಗಾರಪ್ಪ ಮುಂತಾದವರಿದ್ದರು.