“ಶ್ರೀ ರಾಮ ಸೇವಾ ಬಳಗ (ರೀ)” ನಡೆದ ವಿಪ್ರ ಕ್ರೀಡೋತ್ಸವ ಕ್ರಿಕೆಟ್ ಪಂದ್ಯಾಟವನ್ನು ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಅವರು ಉದ್ಘಾಟಿಸಿದರು, ಚಂದ್ರಶೇಖರ್ ಆಚಾರ್ಯ, ವಿಷ್ಣುಮೂರ್ತಿ ಆಚಾರ್ಯ, ಶ್ರೀನಿವಾಸ ಕೊಡಂಚ, ಶ್ರೀನಿವಾಸ ಭಾದ್ಯ, ಶ್ರೀಧರ್ ಭಟ್, ದಿನೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.ಸಮಾರೋಪ ಸಮಾರಂಭದಲ್ಲಿ “ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರೀ)” ಅಧ್ಯಕ್ಷರು ವಿಷ್ಣು ಪ್ರಸಾದ್ ಪಾಡಿಗಾರು ಇವರು ಮಾತನಾಡಿ “ಯುವಕರಿಗೆ ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಬೆಳಸಿಕೊಳ್ಳಿ” ಎಂದು ಕಿವಿಮಾತನ್ನು ವ್ಯಕ್ತಪಡಿಸಿದರು. ಹಾಗೆ ಪ್ರಸಿದ್ಧ ವೀಕ್ಷಕ ವಿವರಣೆಗಾರ ಕೋಟ ಶಿವನಾರಾಯಣ ಐತಾಳ್ ಇವರ 30 ವರ್ಷದ ಸಾಧನೆಯನ್ನು ಗುರುತಿಸಿ “ಕ್ರೀಡಾ ಕಲಾ ವಲ್ಲಭ” ಎಂಬ ಬಿರುದಿನೊಂದಿಗೆ ಸನ್ಮಾನಿಸಲಾಯಿತು.