ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ಮಹಾಬಲೇಶ್ವರ ಭಾಗವತ್ ರವರಿಗೆ ಗುರು ಅಭಿನಂದನೆ 

ಮಧೂರು ಮಾಧುರ್ಯ ವತಿಯಿಂದ ಅಕಾಡೆಮಿ ಸ್ಕೂಲ್ ಆಫ್ ಮ್ಯೂಸಿಕ್ & ಫೈನ್ ಆರ್ಟ್ಸ್ ನ ಸಂಗೀತ ಗುರುಗಳು ಹಾಗೂ 2004ರ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರೂ ಆದ ಪಂಡಿತ್ ಮಹಾಬಲೇಶ್ವರ ಭಾಗವತ್ ( ಶ್ರೀಮತಿ ಲಕ್ಷ್ಮಿ ಭಾಗವತ್ ಜತೆಗೂಡಿ) ಇವರಿಗೆ ದಿ. ವಿದ್ವಾನ್ ರಾಮ್ ಭಟ್ ಇವರ ಸಂಸ್ಮರಣೆಯಲ್ಲಿ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಗುರುವಂದನೆ ಸಲ್ಲಿಸಿದರು.

ಉಡುಪಿಯ ಖ್ಯಾತ ಹೋಟೆಲ್ ಉದ್ಯಮಿ ಶ್ರೀ ವಿಶ್ವನಾಥ ಶೆಣೈಯವರು ಶುಭಾಶಂಸನೆಗೈದರು. ಶ್ರೀಮತಿ ಸುಮಾ ಮಧೂರು, ಸಮಿತಿಯ ಕಾರ್ಯಾಧ್ಯಕ್ಷ ರಾಘವೇಂದ್ರ ಆಚಾರ್ಯ, ಕಾರ್ಯದರ್ಶಿ ಉಮಾಮಹೇಶ್ವರಿ, ರಾಂ ಭಟ್ ಅವರ ಪುತ್ರಿ ಶ್ರೀಮತಿ ಉಮಾ ಭಟ್ , ಸದಾಶಿವ ರಾವ್ ಹಾಜರಿದ್ದರು.

 
 
 
 
 
 
 
 
 
 
 

Leave a Reply