ಕುಕ್ಕಿಕಟ್ಟೆ : ಶ್ರೀ ಕೃಷ್ಣ ಬಾಲನಿಕೇತನದಲ್ಲಿ ರೋಟರಿ ಉಡುಪಿ, ಶ್ರೀ ಕೃಷ್ಣ ರೋಟರಾಕ್ಟ್, ಇನ್ನರ್ ವೀಲ್, ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ್ ಕ್ಲಬ್ ಮತ್ತು ಚೈಲ್ಡ್ ಲೈನ್ ಉಡುಪಿ ಜಂಟಿಯಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ವನ್ನು ಸಂಭ್ರಮದಿಂದ ಆಚರಿಸಿದರು.
ರೋಟರಿ ಅಧ್ಯಕ್ಷ ರೋ ಹೇಮಂತ್ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ಕ್ಕಾಗಿ ಬಲಿದಾನ ಮಾಡಿದ ಎಲ್ಲಾ ಮಹಾತ್ಮರ ಕೋಡುಗೆಯನ್ನು ಸ್ಮರಿಸಿ ಮುಂದಿನ ಪೀಳಿಗೆ ಅವರ ತ್ಯಾಗದ ಮಹತ್ವವನ್ನು ಅರಿತು ದೇಶವನ್ನು ಮುನ್ನಡೆಸಲಿ ಎಂದು ಹಾರೈಸಿದರು.
ಚೈಲ್ಡ್ ಲೈನ್ ನಿರ್ದೇಶಕ ರೋ.ರಾಮಚಂದ್ರ ಉಪಾಧ್ಯಾಯ ಎಲ್ಲರನ್ನೂ ಸ್ವಾಗತಿಸಿ ಅಮೃತ ಮಹೋತ್ಸವದ ಶುಭಕಾಮನೆಗಳನ್ನು ತಿಳಿಸಿದರು. ರೋ. ಗುರುರಾಜ ಭಟ್ ವಂದಿಸಿದರು.
ರೋಟರಾಕ್ಟ್ ಅಧ್ಯಕ್ಷೆ ರೋ.ಮೇಘನಾ ರಾವ್, ರೋಟರಿ ಕಾರ್ಯದರ್ಶಿ ರೋ. ಗೋಪಾಲಕೃಷ್ಣ ಪ್ರಭು ಮತ್ತು ರೋಟರಿ, ರೋಟರಾಕ್ಟ್ ಇನ್ನರ್ ವೀಲ್, ಇಂಟರಾಕ್ಟ್ ಸದಸ್ಯರು, ಚೈಲ್ಡ್ ಲೈನ್ ಸದಸ್ಯರು, ಬಾಲನಿಕೇತನದ ಮಕ್ಕಳು ಭಾಗವಹಿಸಿದರು.