ನವೋಲ್ಲಾಸ, ನವ ಚಿಂತನೆ
ಸಂಭ್ರಮಯೊಂದಿಗೆ ಸಾಗಿ ಬರುತ್ತಿದೆ “ಕರಾವಳಿ ಎಕ್ಸ್ ಪ್ರೆಸ್”.!
ಜನಮನದಿ ಮಾಡಿದೆ ಇಂಪ್ರೆಸ್!!
ಸ್ಥಳೀಯ, ಪ್ರಾದೇಶಿಕ, ದೇಶಿ ವಿದೇಶಿ ಸುದ್ದಿಗಳು,
ನುಡಿಮುತ್ತು, ಛಾಯಂಕಣ, ಕವಿವಾಣಿಗಳು ದೈನಂದಿನ ಅಂಕಣಗಳು ಹಲವು ಲೇಖನ ಪ್ರಕಾರಗಳು.
ಸುದ್ದಿಯಲ್ಲಿ ನಿಖರತೆ, ಸುದ್ದಿಮೂಲದ ಖಚಿತತೆ,
ವಿಶ್ಲೇಷಣೆಯಲ್ಲಿ ಸರಳತೆ,
ಇದುವೇ -ಕರಾವಳಿ ಎಕ್ಸ್ ಪ್ರೆಸ್ ವಿಶೇಷತೆ!
ಅಂತರ್ಜಾಲ ಪತ್ರಿಕೆಯೆಂದು ಮಾಡದಿರಿ ಅಲಕ್ಷ್ಯ!
ಕಾರಣ : ವೀಕ್ಷಕರ ಸಂಖ್ಯೆ ದಾಟಿದೆ ನಾಲ್ಕುವರೇ ಲಕ್ಷ!!
ಪ್ರಕಟಣೆಗೆ ತುಂಬಿದೆ ವರ್ಷ
ತಂದಿದೆ ನಮ್ಮೆಲ್ಲರಲಿ ಹರ್ಷ
ಇದಕ್ಕೆ ಕಾರಣವು : ವೀಕ್ಷಕರ ಒಲುಮೆಯು..
ಶ್ರೀ ಶಂಕರನಾರಾಯಣರ ಆಶೀರ್ವಾದವು
ಸುದ್ದಿ ಪ್ರಕಟಣೆ ಜೊತೆಗೆ ಯುವ ಬರಹಗಾರರಿಗೆ ವೇದಿಕೆ ಸೃಷ್ಟಿ!
ಇದುವೇ ಸನ್ಮಿತ್ರ ಸಾರಥಿ
ಜಿ. ಕೆ. ಅವರ ಸಮ್ಯಕ್ ದೃಷ್ಟಿ!!
ಈ ಪಯಣ ಸಾಗಲಿ
ಪತ್ರಿಕೆ ಮೂಲಕ ಈಡೇರಲಿ ಕರಾವಳಿಗಾರ ಆಶೋತ್ತರ!
ಪತ್ರಿಕೆಗಿರಲಿ ನಮ್ಮೆಲ್ಲರ ಬೆಂಬಲ ನಿರಂತರ!!
ಸದಾಶಯಗಳೊಂದಿಗೆ,