ಓದುಗರ ಮನದಾಳದ ಮಾತು ~ಮಂಜಪ್ಪ ದ್ಯಾ ಗೋಣಿ(ಮದ್ಯಾಗೋ)

ಕರಾವಳಿ ಎಕ್ಸ್ ಪ್ರೆಸ್ ಪಯಣ ಸಾಗಲಿ ನಿರಂತರ

ನವೋಲ್ಲಾಸ, ನವ ಚಿಂತನೆ
ಸಂಭ್ರಮಯೊಂದಿಗೆ ಸಾಗಿ ಬರುತ್ತಿದೆ “ಕರಾವಳಿ ಎಕ್ಸ್ ಪ್ರೆಸ್”.!
ಜನಮನದಿ ಮಾಡಿದೆ ಇಂಪ್ರೆಸ್!!

ಸ್ಥಳೀಯ, ಪ್ರಾದೇಶಿಕ, ದೇಶಿ ವಿದೇಶಿ ಸುದ್ದಿಗಳು,
ನುಡಿಮುತ್ತು, ಛಾಯಂಕಣ, ಕವಿವಾಣಿಗಳು ದೈನಂದಿನ ಅಂಕಣಗಳು ಹಲವು ಲೇಖನ ಪ್ರಕಾರಗಳು.

ಸುದ್ದಿಯಲ್ಲಿ ನಿಖರತೆ, ಸುದ್ದಿಮೂಲದ ಖಚಿತತೆ,
ವಿಶ್ಲೇಷಣೆಯಲ್ಲಿ ಸರಳತೆ,
ಇದುವೇ -ಕರಾವಳಿ ಎಕ್ಸ್ ಪ್ರೆಸ್ ವಿಶೇಷತೆ!

ಅಂತರ್ಜಾಲ ಪತ್ರಿಕೆಯೆಂದು ಮಾಡದಿರಿ ಅಲಕ್ಷ್ಯ!
ಕಾರಣ : ವೀಕ್ಷಕರ ಸಂಖ್ಯೆ ದಾಟಿದೆ ನಾಲ್ಕುವರೇ ಲಕ್ಷ!!

ಪ್ರಕಟಣೆಗೆ ತುಂಬಿದೆ ವರ್ಷ
ತಂದಿದೆ ನಮ್ಮೆಲ್ಲರಲಿ ಹರ್ಷ
ಇದಕ್ಕೆ ಕಾರಣವು : ವೀಕ್ಷಕರ ಒಲುಮೆಯು..
ಶ್ರೀ ಶಂಕರನಾರಾಯಣರ ಆಶೀರ್ವಾದವು

ಸುದ್ದಿ ಪ್ರಕಟಣೆ ಜೊತೆಗೆ ಯುವ ಬರಹಗಾರರಿಗೆ ವೇದಿಕೆ ಸೃಷ್ಟಿ!
ಇದುವೇ ಸನ್ಮಿತ್ರ ಸಾರಥಿ
ಜಿ. ಕೆ. ಅವರ ಸಮ್ಯಕ್ ದೃಷ್ಟಿ!!

ಈ ಪಯಣ ಸಾಗಲಿ
ಪತ್ರಿಕೆ ಮೂಲಕ ಈಡೇರಲಿ ಕರಾವಳಿಗಾರ ಆಶೋತ್ತರ!
ಪತ್ರಿಕೆಗಿರಲಿ ನಮ್ಮೆಲ್ಲರ ಬೆಂಬಲ ನಿರಂತರ!!

ಸದಾಶಯಗಳೊಂದಿಗೆ,

ಮಂಜಪ್ಪ ದ್ಯಾ ಗೋಣಿ(ಮದ್ಯಾಗೋ) ಪತ್ರಿಕೋದ್ಯಮ ಉಪನ್ಯಾಸಕರು, ಉಡುಪಿ -ಪುತ್ತೂರು
 
 
 
 
 
 
 
 
 
 
 

Leave a Reply