ಯುದ್ಧ~ ಜನಾರ್ದನ ಅಡಿಗ

ಕೋರಾನ ಮುಗದ್ದೇ ಸೈ
ಈಗ್ಯಾಕೆ ಯುದ್ಧ ಶುರುವಾಯ್ತು ಕಾಣಿ !

ಒಣ ಹುಲ್-ಕಟ್ಟಿಗೆ ಹತ್ತು ರೂಪೈ
ತೆಂಗಿನ ಕಾಯ್ಗೆ ಬೆಲೆ ಇಲ್ಲ, ಕೇಂಬರಿಲ್ಲ
ನೆಲಗ್ಡಲೆಗೆ ಬೆಂಕಿ ರೋಗೊ
ಒಂದ ಎರಡ ಮೇಲಿಂದ್ ಮೇಲ್ ಸೋಲ್ !

ದೊಡ್ಡಣ್ಣ ಚೆಣ್ಣಣ್ಣ ಎಲ್ಲರೂ ಸೇರ್ಕಂಡ್
ಹೊಡಕಂಬದ್ ಬ್ಯಾಡ
ಮಕ್ಕಳ್ ಮರಿ ಕೊಂದ್ ಕಸಕಂಬುದು ಬ್ಯಾಡ
ಬೇಕು ನಮಗೆ ಶಾಂತಿಪ್ರಿಯ ಬುದ್ಧ !

ಮನಿ ದೊಡ್ಡದು ಮನಸ್ ಸಣ್ಣದು
ನಮ್ ಧರ್ಮ ನಮ್ ಕರ್ಮ
ಎಂದೆಲ್ಲಾ ಕೂಗುದ್ ಬ್ಯಾಡ
ಈ ಗಾಳಿ, ಈ ನೀರ್, ಈ ಬೆಂಕಿ ಒಡುದು ಬ್ಯಾಡ !

ಹಮ್ ಬಿಟ್ಟು ಉಸಿರ‍್ ಬಿಡುವ
ಬಿಸಿಲ್ ಬೆಂಕಿಗೆ ಪನ್ನಿರ್ ಹಾಕುವ
ನೀಲ್ ಬಾನ್ ತಿಳಿನೀರ್ ಕೆಸರಾಪದ್ ಬ್ಯಾಡ
ಯುದ್ಧ ಬ್ಯಾಡ ಮಾರಾಯ್ರೇ ಯುದ್ಧ ಬ್ಯಾಡ !

ಜನಾರ್ದನ ಅಡಿಗ
ಪಂಚಾಂಗ ಮಂದಿರ ಮೊಗೇರಿ

 
 
 
 
 
 
 
 
 
 
 

Leave a Reply