ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಮೂಲಕ ಬೇಡಿಕೆಗಳ ಮನವಿ

ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಮೂಲಕ ನಮ್ಮ ಬಹುದಿನಗಳ ಬೇಡಿಕೆಗಳಾದ ವಿಪರೀತ ಪರವಾನಿಗೆ ಶುಲ್ಕವನ್ನು ಗರಿಷ್ಠ ರೂಪಾಯಿ 500ಕ್ಕೆ  ಇಳಿಕೆ, ವಾಣಿಜ್ಯ ಕಟ್ಟಡ ತೆರಿಗೆಯ ಇಳಿಕೆ, ಉದ್ಯಮಿಗಳಿಗೆ ಆರೋಗ್ಯ ಮತ್ತು ಜೀವ ವಿಮೆ , ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರ, ಇತರ ಬೇಡಿಕೆಗಳನ್ನು ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ರಿಗೆ ತಲುಪಿಸಿ ಅವುಗಳನ್ನು  ಈಡೇರಿಸುವ ಬಗ್ಯೆ ವೇದಿಕೆಯ  ಪದಾಧಿಕಾರಿಗಳು ಶಾಸಕ ಕೆ ರಘುಪತಿ ಭಟ್, ಡಿಸಿ ಕೂರ್ಮಾರಾವ್, ಉಸ್ತುವಾರಿ ಸಚಿವರು ಶ್ರೀ k ಅಂಗಾರ, ಅವರಿಗೆ  ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ವೇದಿಕೆ ಯ ಅಧ್ಯಕ್ಷರಾದ ಶ್ರೀ ದಿವಾಕರ ಸನಿಲ್ ಉಪಾಧ್ಯಕ್ಷ ಶ್ರೀ ಆನಂದ ಕಾರ್ನಾಡ್, ಕಾರ್ಯದರ್ಶಿ ಶ್ರೀ ಮ್ಯಾಕ್ಸಿಮ್ ಸಾಲ್ದನ, ಖಜಾಂಚಿ ಶ್ರೀ ಡೊನಾಲ್ಡ್ ಸಾಲ್ದಾನ , ಸ್ಥಾಪಕ ಅಧ್ಯಕ್ಷ ಶ್ರೀ dolfi ವಿಕ್ಟರ್ ಲೂವಿಸ್, ಶ್ರೀ ಸತ್ಯಾನಂದ ನಾಯಕ್, ಶ್ರೀ ಮಟ್ಟರ್ ಗಣೇಶ್ ಕಿಣಿ, ಶ್ರೀ ವಾಲ್ಟರ್ ಸಾಲ್ದಾನ್, ಶ್ರೀ ಬಿರ್ತಿ ಗಂಗಾಧರ, ಶ್ರೀ ರೋಷಿ ತ್ ಜಯನಂದನ್, ಶ್ರೀ ಪ್ರಕಾಶ್ ಕೊಡವೂರು ಮತ್ತು ಇತರ ಸದಸ್ಯರು ಹಾಜರಿದ್ದರು.

 
 
 
 
 
 
 
 
 
 
 

Leave a Reply