‘ಏಳಿ ಎದ್ದೇಳಿ ಶಾಂತಿಗಾಗಿ’ ಪಿಪಿಸಿಯಲ್ಲಿ ವಿಶೇಷ ಉಪನ್ಯಾಸ

ಉಡುಪಿ : ಜಗತ್ತಿನಲ್ಲಿ ಶಾಂತಿ ನೆಲೆಸುವುದಕ್ಕಾಗಿ ನಾವೆಲ್ಲ ಎದ್ದು ನಿಲ್ಲಬೇಕಿದೆ. ಇನ್ನೊಬ್ಬರ ಮೇಲೆ ಕ್ರೋಧ ಸಾಧಿಸುವ ಬದಲು ಪ್ರೀತಿಯನ್ನು ಹಂಚಬೇಕು ಎಂದು ಪಡುಬಿದ್ರಿಯ ಗಣಪತಿ ಹೈಸ್ಕೂಲಿನ ಶಿಕ್ಷಕರೂ, ಗಮಕ ವ್ಯಾಖ್ಯಾನಕಾರರೂ ಆಗಿರುವ ಡಾ. ರಾಘವೇಂದ್ರ
ರಾವ್ ಹೇಳಿದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಕನ್ನಡ ವಿಭಾಗ ಹಾಗೂ ವಿದ್ಯಾರ್ಥಿ ವೇದಿಕೆಯ ಜಂಟಿ ಆಶ್ರಯದಲ್ಲಿ ದಿನಾಂಕ : ೨೬-೦೩-೨೦೨೪ರಂದು ನಡೆದ ‘ಏಳಿ ಎದ್ದೇಳಿ ಶಾಂತಿಗಾಗಿ’ ಕವನದ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಸಂಧಾನದ ಪ್ರಯತ್ನವೆಲ್ಲ ಸೋತಾಗಲೇ ಯುದ್ಧಗಳು ನಡೆಯುವಂತಹದ್ದು.
ರಾಮಾಯಣ, ಮಹಾಭಾರತಗಳಲ್ಲೂ ಇದಕ್ಕೆ ಸಾಕಷ್ಟು ದೃಷ್ಟಾಂತಗಳು ಕಾಣಿಸುತ್ತವೆ. ಯುದ್ಧ ಜೀವಸಂಕುಲಕ್ಕೆ ಎಂದಿಗೂ ಒಳಿತನ್ನು ಉಂಟುಮಾಡುವುದಿಲ್ಲ. ವೇದಮoತ್ರಗಳೂ ಶಾಂತಿಯನ್ನೇ ಬೋಧಿಸಿವೆ. ವಿಷ್ಣು ಮತ್ಸö್ಯ, ವರಾಹ ಮೊದಲಾದ ಅವತಾರಗಳ ಮೂಲಕ ಶಾಂತಿಸ್ಥಾಪನೆ ಮಾಡಿದ ಕಥೆ ನಮಗೆ ಆದರ್ಶವಾಗಬೇಕಿದೆ. ಆದರೆ ಪ್ರಸ್ತುತ ಎಲ್ಲೆಡೆಯೂ ನಾವು ಯುದ್ಧದ ಭೀಕರತೆಯನ್ನು ಕಾಣುವಂತಾಗಿರುವುದು ದುಃಖದ
ಸಂಗತಿ ಎಂದರು.
ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿಬಿಎ ವಿದ್ಯಾರ್ಥಿಗಳಿಗೆ ಪಠ್ಯವಾಗಿರುವ ಈ ಕವನವನ್ನು ಡಾ. ರಾಘವೇಂದ್ರ ರಾವ್ ಅವರೇ ರಚಿಸಿದ್ದು, ಕವನದ ಕುರಿತು ಸ್ವತಃ ಕವಿಯಿಂದಲೇ ಉಪನ್ಯಾಸ ನೆರವೇರಿತು.
 
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ಮಂಜುನಾಥ ಕರಬ, ಐಕ್ಯುಎಸಿ ಸಂಯೋಜಕರಾಗಿರುವ ಡಾ. ವಿನಯ್ ಕುಮಾರ್, ಕರ‍್ಯಕ್ರಮ ಹಾಗೂ ವಿದ್ಯಾರ್ಥಿ ವೇದಿಕೆಯ ಸಂಯೋಜಕರಾಗಿರುವ ಕನ್ನಡ ಉಪನ್ಯಾಸಕ ಡಾ. ಶಿವಕುಮಾರ ಅಳಗೋಡು, ಡಾ. ನಾಗರಾಜ ಜಿ.ಪಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply