ತುಳುವೆರೆ ಗೊಬ್ಬುಲು-2024 -ಯುಪಿಎಂಸಿ ಗೆ ಪ್ರಶಸ್ತಿಗಳ ಗರಿ

ತುಳುಕೂಟ ಉಡುಪಿ (ರಿ), ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಹಾಗೂ ಲಯನ್ಸ್ ಕ್ಲಬ್ ಉಡುಪಿ ಅಮೃತ್ ಇವರುಗಳ ಸಹಭಾಗಿತ್ವದಲ್ಲಿ ಕ್ರಿಶ್ಚಿಯನ್ ಪ್ರೌಢಶಾಲೆ ಕ್ರೀಡಾಂಗಣ ಉಡುಪಿಯಲ್ಲಿ ಫೆಬ್ರವರಿ 25 ರಂದು ನಡೆದ ತುಳುವೆರೆ ಗೊಬ್ಬುಲು -2024 ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಗರಿಷ್ಠ ಸಾಧನೆಯನ್ನು ಮೆರೆದಿದ್ದಾರೆ.

ಸ್ಪರ್ಧೆಯ ವೈಯುಕ್ತಿಕ ವಿಭಾಗದಲ್ಲಿ ಕರದರ್ಪುನಿ- ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಸವೀನ್ ಪಾಲನ್ ತೃತೀಯ ಬಿಬಿಎ ಪ್ರಥಮ ಸ್ಥಾನ, 

ತಾರಾಯಿದ ಕಟ್ಟ-ತೆಂಗಿನಕಾಯಿದ ಅಂಕ ಸ್ಪರ್ಧೆಯಲ್ಲಿ ವಿನಾಯಕ್ ಪ್ರಥಮ ಬಿ.ಕಾಂ ಪ್ರಥಮ ಸ್ಥಾನ ಹಾಗೂ ಮಡಲ್ ಮುಡೆವುನಿ – ತೆಂಗಿನ ಗರಿ ಹೆಣೆಯುವ ಸ್ಪರ್ಧೆಯಲ್ಲಿ ರಕ್ಷಿತಾ ತೃತೀಯ ಬಿಬಿಎ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.

ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ ವಿಜೇತರನ್ನು ಅಭಿನಂದಿಸಿದರು, ಕಾಲೇಜಿನ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply