​​ದೇವ್ ಜ್ಯೋತಿ ​ರೇ ಇವರಿಂದ ಕ್ರೀಡಾ ಕ್ಷೇತ್ರ ಸಾಧಕಿ ತೃಷಾ ರವರಿಗೆ ಅಭಿನಂದನೆ  

ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ​ ದೇವ್ ಜ್ಯೋತಿ ​ರೇ ಇವರಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಾಪು ಪೊಲೀಸ್ ಠಾಣಾ ಹೆಚ್.ಸಿ ಅಮೃತೇಶ್ ರವರ ಮಗಳು ಕುಮಾರಿ ತೃಷಾ ರವರನ್ನು ಅಭಿನಂದಿಸಲಾಯಿತು.  

ಕುಮಾರಿ ತೃಷಾ ರವರು ಉಡುಪಿಯ ಸೈಂಟ್ ಸಿಸಿಲಿಯಾ ಹೈಸ್ಕೂಲಿನಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುತ್ತಾರೆ. 2018-19 ರಲ್ಲಿ ತುಮ ಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಯಲ್ಲಿ 400 ಮೀಟರ್ ಓಟವನ್ನು 1:02:77 ಸಮಯದಲ್ಲಿ ಪೂರೈಸಿ ರಾಜ್ಯ ಮಟ್ಟದ ದಾಖಲೆ ನಿರ್ಮಿಸಿರುತ್ತಾರೆ.

ಅಲ್ಲದೇ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಗಳಲ್ಲಿ 100 ಮೀಟರ್, 200 ಮೀಟರ್, ಹಾಗೂ 400 ಮೀಟರ್ ಓಟಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್, ಭರತ್ ರೆಡ್ಡಿ , ಡಿವೈಎಸ್ಪಿ ಕಾರ್ಕಳ ಹಾಗೂ ಸಿಪಿಐ ಕಾಪು ಮಹೇಶ್ ಪ್ರಸಾದ್ ರವರು ಹಾಜರಿದ್ದರು.

 
 
 
 
 
 
 
 
 
 
 

Leave a Reply