ಪುತ್ತೂರು ಬ್ರಾಹ್ಮಣ ಮಹಾಸಭಾಗೆ ಕೆ. ದುರ್ಗಾಪ್ರಸಾದ್ ಭಾರ್ಗವ ಸಾರಥ್ಯ

ಬ್ರಾಹ್ಮಣ ಮಹಾಸಭಾ (ರಿ.) ಪುತ್ತೂರು ಇದರ ವಾರ್ಷಿಕ ಮಹಾಸಭೆಯು ಆದಿತ್ಯವಾರ ಪುತ್ತೂರಿನ ಭಗವತೀ ಸಭಾಗೃಹದಲ್ಲಿ, ಮಹಾಸಭಾದ ಅಧ್ಯಕ್ಷರಾದ ಪ್ರೊ. ಸುಬ್ರಹ್ಮಣ್ಯ ಜೋಶಿಯವರ ಅಧ್ಯಕ್ಷತೆಯಲ್ಲಿ ಜರುಗಿತು. 
ಕಾರ್ಯದರ್ಶಿ ಶ್ರೀ ಜಿ. ವಿ. ಆಚಾರ್ಯ ೨೦೨೦- ೨೧ರ ವಾರ್ಷಿಕ ವರದಿ ಹಾಗೂ ಖಜಾಂಚಿ ಶ್ರೀ ವಿಜಯ್‌ಕುಮಾರ್ ವೈ. ೨೦೨೦- ೨೧ರ ಲೆಕ್ಕಪತ್ರ ಮಂಡಿಸಿದರು. ೨೦೨೧-೨೩ನೇ ಸಾಲಿಗೆ ಶ್ರೀ ಕೆ. ದುರ್ಗಾಪ್ರಸಾದ್ ಭಾರ್ಗವ್ ಅಧ್ಯಕ್ಷರಾಗಿಯೂ, ಜಿ.ವಿ.ಆಚಾರ್ಯ ಕಾರ್ಯದರ್ಶಿ ಯಾಗಿಯೂ, ಎಂ. ರಾಮಚಂದ್ರ ಆಚಾರ್ಯ ಖಜಾಂಚಿಯಾಗಿಯೂ ಆಯ್ಕೆಯಾದರು. ಶ್ರೀಯುತ ವೈ. ಗಣೇಶ್ , ಲೆಕ್ಕ ಪರಿಶೋಧಕರನ್ನಾಗಿ ಮುಂದುವರಿಸಲು ನಿರ್ಧರಿಸಲಾಯಿತು. 
ಈ ಮಹಾಸಭೆಯಲ್ಲಿ ವಿದ್ಯಾನಿಧಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್, ಆಪತ್ಬಾಂಧವ ಸಮಿತಿಯ ಅಧ್ಯಕ್ಷರಾದ ನರಸಿಂಹ ಆಚಾರ್ಯ ಹಾಗೂ ಮಹಾಸಭಾದ ಸದಸ್ಯರು ಹಾಜರಿದ್ದರು.
 
 
 
 
 
 
 
 
 
 
 

Leave a Reply