ಬ್ರಾಹ್ಮಣ ಮಹಾಸಭಾ (ರಿ.) ಪುತ್ತೂರು ಇದರ ವಾರ್ಷಿಕ ಮಹಾಸಭೆಯು ಆದಿತ್ಯವಾರ ಪುತ್ತೂರಿನ ಭಗವತೀ ಸಭಾಗೃಹದಲ್ಲಿ, ಮಹಾಸಭಾದ ಅಧ್ಯಕ್ಷರಾದ ಪ್ರೊ. ಸುಬ್ರಹ್ಮಣ್ಯ ಜೋಶಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯದರ್ಶಿ ಶ್ರೀ ಜಿ. ವಿ. ಆಚಾರ್ಯ ೨೦೨೦- ೨೧ರ ವಾರ್ಷಿಕ ವರದಿ ಹಾಗೂ ಖಜಾಂಚಿ ಶ್ರೀ ವಿಜಯ್ಕುಮಾರ್ ವೈ. ೨೦೨೦- ೨೧ರ ಲೆಕ್ಕಪತ್ರ ಮಂಡಿಸಿದರು. ೨೦೨೧-೨೩ನೇ ಸಾಲಿಗೆ ಶ್ರೀ ಕೆ. ದುರ್ಗಾಪ್ರಸಾದ್ ಭಾರ್ಗವ್ ಅಧ್ಯಕ್ಷರಾಗಿಯೂ, ಜಿ.ವಿ.ಆಚಾರ್ಯ ಕಾರ್ಯದರ್ಶಿ ಯಾಗಿಯೂ, ಎಂ. ರಾಮಚಂದ್ರ ಆಚಾರ್ಯ ಖಜಾಂಚಿಯಾಗಿಯೂ ಆಯ್ಕೆಯಾದರು. ಶ್ರೀಯುತ ವೈ. ಗಣೇಶ್ , ಲೆಕ್ಕ ಪರಿಶೋಧಕರನ್ನಾಗಿ ಮುಂದುವರಿಸಲು ನಿರ್ಧರಿಸಲಾಯಿತು.
ಈ ಮಹಾಸಭೆಯಲ್ಲಿ ವಿದ್ಯಾನಿಧಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್, ಆಪತ್ಬಾಂಧವ ಸಮಿತಿಯ ಅಧ್ಯಕ್ಷರಾದ ನರಸಿಂಹ ಆಚಾರ್ಯ ಹಾಗೂ ಮಹಾಸಭಾದ ಸದಸ್ಯರು ಹಾಜರಿದ್ದರು.