ಉಡುಪಿಯ ವಿವಿಧ ಸಂಘ -ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಡುಪಿಯ ಎಂಜಿಎ0 ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಗಸ್ಟ್ ೦೬, ಭಾನುವಾರದಂದು ಬೆಳಿಗ್ಗೆ ಗಂಟೆ ೯:೦೦ ರಿಂದ೧.೧೫ ರವರೆಗೆ ನಡೆಯಲಿದೆ.ಬೆಳಿಗ್ಗೆ ಗಂಟೆ ೯:೧೫ ರಿಂದ ೯:೪೫ ರವರೆಗೆ ಸರಿಗಮ ಭಾರತಿ ಪರ್ಕಳ ಇವರಿಂದ ಸಾಂಸ್ಕೃತಿಕ ಸೌರಭ ನಡೆಯಲಿದೆ. ೯.೫೦ರಿಂದ ೧೦:೩೦ರ ವರೆಗೆ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನುಡಿ ಸಂದೇಶ: ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಮಠಾಧಿಪತಿಗಳು, ಶ್ರೀ ಜೈನ ಮಠ ಮೂಡುಬಿದಿರೆ, ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾ ಕುಮಾರಿ, ಪ್ರೊ| ಲಕ್ಷ್ಮೀನಾರಾಯಣ ಕಾರಂತ್, ನೀಲಾವರ ಸುರೇಂದ್ರ ಅಡಿಗ, ಮುರಳೀಧರ ಉಪಾಧ್ಯ ಹಿರಿಯಡ್ಕ, ಪೂರ್ಣಿಮಾ, ಡಾ.ಪಿ.ವಿ ಭಂಡಾರಿ, ಉಡುಪಿ ವಿಶ್ವನಾಥ ಶೆಣೈ, ಜಯಕರ್ ಶೆಟ್ಟಿ ಇಂದ್ರಾಳಿ ಉಪಸ್ಥಿತರಿರುವರು.
೧೦:೩೦ ರಿಂದ ೧೦:೪೫ರವರೆಗೆ ಡಾ| ಯು.ಬಿ.ಪವನಜ ಬೆಂಗಳೂರು ಕಂಪ್ಯೂಟರ್ ಮತ್ತು ಕೆ.ಪಿ.ರಾವ್ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ೧೦:೪೫ರಿಂದ ೧೧:೦೦ ರವರೆಗೆ ಪ್ರೊ| ವರದೇಶ ಹಿರೇಗಂಗೆರವರು ಕೆ.ಪಿ.ರಾವ್ ಬದುಕು ಹಾಗೂ ವರ್ಣಕ ಕಾದಂಬರಿ ಬಗ್ಗೆ ಹಾಗು ೧೧:೦೦ರಿಂದ ೧೧:೦೫ ಡಾ| ಎನ್.ಟಿ.ಭಟ್ ಇವರು ಕೆ.ಪಿ.ರಾವ್ರೊಂದಿಗಿನ ಒಡನಾಟದ ಬಗ್ಗೆ ಮಾತನಾಡಲಿರುವರು.
೧೧:೦೫ ರಿಂದ ೧೨.೦೫ರವರೆಗೆ ಕೆಪಿ ರಾವ್ ಅವರೊಂದಿಗೆ ಮಾತುಕತೆ ಎಂಬ ವಿಷಯದಲ್ಲಿ ಪಾದೆಕಲ್ಲು ವಿಷ್ಣು ಭಟ್, ಡಾ| ಮಹಾಲಿಂಗ ಭಟ್, ಡಾ| ನೀತಾ ಇನಾ೦ದಾರ್, ಡಾ.ಉದಯ ಶಂಕರ ಹೆಚ್.ಎನ್, ಸುಶ್ಮಿತಾ ಶೆಟ್ಟಿ, ಪಲ್ಲವಿ ಕೊಡಗು ಭಾಗವಹಿಸಲಿದ್ದಾರೆ. ಬಳಿಕ ೧೨.೦೫ ರಿಂದ ೧೨.೧೦ರವರೆಗೆ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಇವರಿಂದ ಹಾಡುಗಾರಿಕೆ.