ಉಡುಪಿ ; ಸಹಕಾರಿ ಕ್ಷೇತ್ರದಲ್ಲಿ ಸಹಕಾರವಿದ್ದಲ್ಲಿ ಸಾಧನೆಯೇ ಗುರಿ ಮುಟ್ಟಲು ಸಾಧ್ಯ , ಒಂದು ಸಂಸ್ಥೆ ಉನ್ನತ ಮಟ್ಟಕ್ಕೆ ಏರಲು ಸಿಬ್ಬಂದಿ ಮುಖ್ಯ , ಸಂಸ್ಥೆ ಗೆ ದೊಡ್ಡ ಕಟ್ಟಡ ಮುಖ್ಯ ಅಲ್ಲ. ಅದರ ಸಿಬ್ಬಂಧಿ ಪ್ರಾಮಾಣಿಕವಾಗಿ ಸೇವೆ ನೀಡಿದಾಗ ಸಂಸ್ಥೆ ಅಭಿವೃದ್ಧಿ ಈ ನಿಟ್ಟಿನಲ್ಲಿ ಜಯಕರ ಶೆಟ್ಟಿ ಇಂದ್ರಾಳಿ ಉತ್ತಮ ಉದಾಹರಣೆ.
ಉಡುಪಿ ಇಂಡಸ್ಟ್ರೀಯಲ್ ಕೋ , ಆಪರೇಟಿವ್ ಸೊಸೈಟಿ ವತಿಯಿಂದ ಶನಿವಾರ ಹೋಟೆಲ್ ಓಷನ್ ಪರ್ಲ್ನ ನಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ದ. ಕ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ದೆ ಅಭಿನಂದಿಸಿ ಮಾತನಾಡಿದರು .
ನೌಕರರು ಪ್ರಾಮಾಣಿಕತೆಯಿಂದ ಸೇವೆ ಕೊಟ್ಟರೆ ತಾವೂ ಹಾಗೂ ತಮ್ಮ ಸಂಸ್ಥೆ ಉನ್ನತ ಮಟ್ಟಕೆ ಏರುವುದನ್ನು ಕಾಣಲೂ ಸಾಧ್ಯ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಬೆಳೆದು ಇಂದು ರಾಜ್ಯ ಸಹಕಾರ ಮಹಾ ಮಂಡಲ ನೂತನ ನಿರ್ದೇಶಕರಾಗಿ ಆಯ್ಕೆ ಗೊಂಡ ಜಯಕರ ಶೆಟ್ಟಿಯವರನ್ನು ಸಂಸ್ಥೆ ಪರವಾಗಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿದ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಪ್ರಾಮಾಣಿಕತೆ , ಹಾಗೂ ಮನಸಾಕ್ಷಿ ಪೂರ್ವಕ ದುಡಿದಲ್ಲಿ ಅಧಿಕಾರ ನಮ್ಮನರಸಿ ಬರುತ್ತದೆ , ಸಹಕಾರಿ ಕ್ಷೇತ್ರದ ಸಮಸ್ಯೆಗಳನ್ನೂ ಪರಿಹರಿಸುವು ದಾಗಿ ತಿಳಿಸಿದರು.
ಉಡುಪಿ ಇಂಡಸ್ಟ್ರೀಯಲ್ ಕೋ ,ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಅರುಣಕುಮಾರ ಶೆಟ್ಟಿ ಸ್ವಾಗತಿಸಿದರು. ಉಪಧ್ಯಕ್ಷರಾದ ಮಟ್ಟಾರ್ ಗಣೇಶ್ ಕಿಣಿ ವಂದಿಸಿದರು , ಜನರಲ್ ಮೈನೇಜರ್ ರಾಜೇಶ್ ಹೆಗ್ದೆ ಕಾರ್ಯಕ್ರಮ ನಿರೂಪಣೆಗೈದರು