ಜೂನ್ 14 ವಿಶ್ವರಕ್ತದಾನಿಗಳ ದಿನಚಾರಣೆ ಅಂಗವಾಗಿ ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ವತಿಯಿಂದ ಇಂದು ಇಂಟರೆಕ್ಟ್ ಹಾಲ್ ಕೆಎಂಸಿ ಮಣಿಪಾಲ ಇಲ್ಲಿ ನಡೆದ ಸರಳ ಸಮಾರಂಭವನ್ನು ಡಾ.ಶರತ್ ರಾವ್ ಡೀನ್ ಕೆಎಂಸಿ ಮಣಿಪಾಲ್ ಅವರು ಉದ್ಘಾಟಿಸಿದರು.
ಡಾ.ಅವಿನಾಶ್ ಶೆಟ್ಟಿ ವೈಧ್ಯಕೀಯ ಅಧೀಕ್ಹಕರು ಕೆಎಂಸಿ ಮಣಿಪಾಲ, ಯಶ್ ಪಾಲ್ ಸುವರ್ಣ ಗೌರವ ಅಧ್ಯಕ್ಹರು ಅಭಯಹಸ್ತ ಹೆಲ್ಪ್ ಲೈನ್ ಉಡುಪಿ, ಡಾ.ಶಮಿ ಶಾಸ್ತ್ರೀ ನಿರ್ದೇಶಕರು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ರತ್ನಾಕರ್ ಸಾಮಂತ್ ಮುಖ್ಯ ಭದ್ರತಾ ಅಧಿಕಾರಿ ಕೆಎಂಸಿ ಮಣಿಪಾಲ ಉಪಸ್ಥಿತ್ತರಿದ್ದರು.
ಈ ಸಂದರ್ಭದಲ್ಲಿ ಕಳೆದ ಒಂದು ವರ್ಷದಲ್ಲಿ ನಿರಂತರ ರಕ್ತದಾನ, ರಕ್ತದಾನಿಗಳ ಪೂರೈಕೆ ಹಾಗೂ ರಕ್ತದಾನ ಶಿಬಿರ ಆಯೋಜನೆ ಮಾಡಿದ ಎಂಐಟಿ ಮಣಿಪಾಲದ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ ಇವರನ್ನು ಗೌರವಿಸಲಾಯಿತು…