ಇಂಡಿಯನ್ ಹ್ಯೂಮಾನಿಟೇರಿಯನ್ ಆಫ್ ದ ಇಯರ್”ಪ್ರಶಸ್ತಿ ಪ್ರಧಾನ

ಉಡುಪಿ :- ಇಂಡಿಯನ್ ಬುಕ್ ಆಫ್ ರೆಕಾಡ್೯ ಸಂಸ್ಥೆ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ಇಂಡಿಯನ್ ಹ್ಯೂಮಾನಿಟೇರಿಯನ್ ಆಫ್ ದ ಇಯರ್” ಪ್ರಶಸ್ತಿಯನ್ನು ಯುವ ಲೇಖಕ ರಾಘವೇಂದ್ರ ಪ್ರಭು ಕವಾ೯ಲುರವರು ಆಯ್ಕೆಯಾಗಿದ್ದು ಅದನ್ನು ಸೆ.13 ರಂದು ನೀಲಾವರ ಗೋಶಾಲೆಯಲ್ಲಿ ಅಯೋಧ್ಯೆ ರಾಮ ಕ್ಷೇತ್ರದ ಟ್ರಸ್ಟಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀಥ೯ ಶ್ರೀಪಾದರು ಪ್ರಧಾನ ಮಾಡಿದರು. 

ಕೋವಿಡ್ 19 ಸಂದಭ೯ದಲ್ಲಿ ನಡೆಸುತ್ತಿರುವ ವಿವಿಧ ಸಮಾಜ ಮುಖಿ ಕಾಯ೯ಗಳಿಗೆ ಈ ಪುರಸ್ಕಾರ ನೀಡಲಾಗುತ್ತದೆ. ಈ ಸಂದಭ೯ದಲ್ಲಿ ಉಪನ್ಯಾಸಕ ಗಣೀಶ್ ಪ್ರಸಾದ್ ನಾಯಕ್, ಎಸ್.ಡಿ.ಎಂ ಆಯುವೇ೯ದ ಕಾಲೇಜಿನ ಪ್ರಾಧ್ಯಾಪಕ ಡಾ” ವಿಜಯ್ ನೆಗಳೂರು, ಡಾ.ಚಿತ್ರಾ ನೆಗಳೂರು, ಬಿಲ್ಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮುoತಾದವರಿದ್ದರು

 
 
 
 
 
 
 
 
 
 
 

Leave a Reply