ನವಿ ಮುಂಬೈನಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಅಭಿನಂದನೆ

ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ದೇವಾಡಿಗ ಅಕ್ಷಯ ಕಿರಣ ದಿಂದ ಮನವಿ

ದಿನಾಂಕ 30 ರಂದು ನವಿ ಮುಂಬೈ ಐರೋಲಿ ಯಲ್ಲಿ ಬೈಂದೂರು ನ ನೂತನ ಶಾಸಕರಾದ ಶ್ರೀ ಗಂಟಿಹೊಳೆ ಅವರ ಅಭಿನಂದನಾ ಸಮಾರಂಭದಲ್ಲಿ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ನಿಂದ ಬೈಂದೂರು ನ ಸರ್ಕಾರಿ ಆಸ್ಪತ್ರೆಯನ್ನು ತಾಲೂಕು ಮಟ್ಟದಲ್ಲಿ ಅಭಿವೃದ್ಧಿ ಪಡಿಸಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ, ಅದಕ್ಕೆ ನುರಿತ ತಜ್ಞ ವೈದ್ಯರು ಮತ್ತು ಕನಿಷ್ಠ 3 ಡಯಲಿಸಿಸ್ ಮೆಷಿನ್ ಗಳನ್ನು ಅಳವಡಿಸಿ ಆದಷ್ಟು ಬೇಗ ಈ ಸೇವೆಯನ್ನು ಆರಂಭಿಸಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಅಲ್ಲದೆ ಬಿಜೂರು ಸರ್ಕಾರಿ ಪ್ರೌಢಶಾಲೆಗೆ ವಾಹನ ಸೌಕರ್ಯ ಒದಗಿಸಿ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂದು ಶಾಸಕರಿಗೆ ಬೈಂದೂರು ವಲಯದ ಸೇವಾಧಾರರ ಪರವಾಗಿ ಲಿಖಿತ ಮನವಿ ಸಲ್ಲಿಸಲಾಯಿತು. ಇದಕ್ಕೆ ಉತ್ತರಿಸಿದ ಶಾಸಕರು ಸಮೃದ್ಧಿ ಬೈಂದೂರು ನನ್ನ ಮೊದಲ ಆದ್ಯತೆ ಆದ್ದರಿಂದ ನಿಮ್ಮ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಬಳಗದ ಮುಂಬೈ ಸೇವಾಧಾರರು ಶ್ರೀ ಸುರೇಶ್ ದೇವಾಡಿಗ ಬಾರಕೂರು, ಶ್ರೀ ಪರಮೇಶ್ವರ್ ದೇವಾಡಿಗ ನಾಯ್ಕ್ ನ ಕಟ್ಟೆ, ಶ್ರೀ ರಮೇಶ್ ದೇವಾಡಿಗ ಐರೋಲಿ ಮತ್ತು ಶ್ರೀ ಗಣೇಶ್ ಎಸ್ ಬ್ರಹ್ಮಾವರ್ ಉಪಸ್ಥಿತರಿದ್ದರು. ಶಾಸಕರ ನಿಕಟವರ್ತಿ ಮಹಾರಾಷ್ಟ್ರ ಬಿಜೆಪಿ ದಕ್ಷಿಣ ಭಾರತ ಘಟಕದ ಸದಸ್ಯರು ಶ್ರೀ ಗಣೇಶ್ ಶೆಟ್ಟಿ ಮುರ್ಡೇಶ್ವರ ಅವರು ಈ ಭೇಟಿಯನ್ನು ಏರ್ಪಡಿಸಿದ್ದರು.

 
 
 
 
 
 
 
 
 
 
 

Leave a Reply