ರಘುಪತಿ ಭಟ್ ರಿಗೆ ದುಬೈಯಲ್ಲಿ ಸಂಮಾನ-

ಕರಾವಳಿಯ ಜನಪ್ರಿಯ ಸಮಾಜ ಸೇವೆಕರ್ತ , ಮಾಜಿ ಶಾಶಕ  ರಘುಪತಿ ಭಟ್ ರಿಗೆ  ದುಬೈಯ ಯು.ಎ.ಇ. ಬ್ರಾಹ್ಮಣ ಸಮಾಜ ಅವರ ಸಮುದಾಯ ಸಾಧನೆಯನ್ನು ಗುರುತಿಸಿ , ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. – ‘ಹುಟ್ಟೂರ ಸಾಧಕರಿಗೆ ನಮ್ಮೂರ ಸಂಮಾನ’ – ಶೀರ್ಷಿಕೆಯಲ್ಲಿ ಈ ಸಮಾರಂಭ 26.09.2023, ಮಂಗಳವಾರ ಸಂಜೆ ದುಬೈಯ ಕರಾಮದಲ್ಲಿರುವ ವೀನಸ್ ರೆಸ್ಟೋರೆಂಟ್ ನಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಸ್ಥಾಪಕ ಸಂಚಾಲಕ  ಸುಧಾಕರ ಪೇಜಾವರ ತಿಳಿಸಿರುತ್ತಾರೆ.

ಕಳೆದ ೨೦ ವರ್ಷಗಳಿಂದ ಅಸ್ತಿತ್ವದಲ್ಲಿರುವ ಕರಾವಳಿ ಮೂಲದ ಬ್ರಾಹ್ಮಣರ ಸಮುದಾಯ ವೇದಿಕೆ – ಯು.ಎ.ಇ. ಬ್ರಾಹ್ಮಣ ಸಮಾಜ , ದುಬೈ ಇದೀಗ 20ನೇ ವರ್ಷದ ‘ ವಿಂಶತಿ’ಯ ವಿಜೃಂಭಣೆಯಲ್ಲಿದೆ.

2003ರಿಂದ ನಿರಂತರ ಚಟುವಟಿಕೆಯಲ್ಲಿರುವ ಈ ವೇದಿಕೆಯ ಪ್ರಾಥಮಿಕ ಉದ್ದೇಶ – ನಮ್ಮ ಸಮಾಜದ ಸಂಸ್ಕ್ರತಿ – ಸಂಪ್ರದಾಯಗಳನ್ನು ಸದಾ ಜಾಗ್ರತವಾಗಿರಿಸುವುದು – ತನ್ಮೂಲಕ ಇಲ್ಲಿ ಹುಟ್ಟಿ ಬೆಳೆಯುತ್ತಿರುವ ನಮ್ಮ ಮುಂದಿನ ಪೀಳಿಗೆಗೆ ಅವುಗಳ ಅರಿವು ಮೂಡಿಸುವುದು – ದೂರದಲ್ಲಿದ್ದರೂ ಅವುಗಳಿಂದ ವಂಚಿತರಾಗದಂತೆ, ಆಚರಣೆಗೆ – ಅನುಷ್ಠಾನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಡುವುದು ಸಂಘದ  ಮೂಲ  ಉದ್ದೇಶ.

 
 
 
 
 
 
 
 
 
 
 

Leave a Reply