ಆಸ್ಟ್ರೇಲಿಯನ್ ಸರಕಾರದ ಉಪಮುಖ್ಯ ಮಂತ್ರಿಗೆ ಪುತ್ತಿಗೆ ಪರ್ಯಾಯಕ್ಕೆ ಆಮಂತ್ರಣ


ಆಸ್ಟ್ರೇಲಿಯನ್  ಸರಕಾರದ ಎಂ ಪಿ .ಮತ್ತು ಉಪಮುಖ್ಯ ಮಂತ್ರಿಯಾಗಿರುವ ಪ್ರುರೆ ಕಾರ್ ರವರನ್ನು (ಶಿಕ್ಷಣ ಸಚಿವೆ ) ಸಿಡ್ನಿ ಮಹಾನಗರದಲ್ಲಿ ಶ್ರೀ ಪುತ್ತಿಗೆ ಮಠದ ಪ್ರತಿನಿಧಿಗಳು ಭೇಟಿಯಾಗಿ ಶ್ರೀಗಳ ಅಪೇಕ್ಷೆ ಯಂತೆ ಮುಂಬರುವ  ವಿಶ್ವ ಪ್ರಸಿದ್ಧ ಪರ್ಯಾಯ ಮಹೋತ್ಸವಕ್ಕೆ ಅತಿಥಿ ಯಾಗಿ ಭಾಗವಹಿಸುವಂತೆ
ಆಮಂತ್ರಣವನ್ನು  ನೀಡಲಾಯಿತು .

ಆಮಂತ್ರಣವನ್ನು ಗೌರವದಿಂದ  ಸ್ವೀಕರಿಸಿದ  ಸಚಿವೆ  ವೈಭವದ ಪರ್ಯಾಯದ  ಬಗ್ಗೆ  800 ವರ್ಷ ಗಳಿಂದ  ಬಂದ ಅನೂಚಾನ ಪದ್ಧತಿ ಬಗ್ಗೆ ತಿಳಿದುಕೊಂಡು ಅಚ್ಚರಿಗೊಂಡರು. ಶ್ರೀಗಳ  ಕೋಟಿ ಗೀತಾ ಲೇಖನ ಯೋಜನೆಯ ಬಗ್ಗೆ ತಿಳಿದುಕೊಂಡು ಸಂತಸಪಟ್ಟು ಪರ್ಯಾಯಕ್ಕೆಆಗಮಿಸುವ ಕುರಿತಂತೆ ಆಶಯ ವ್ಯತಪಡಿಸಿದರು .

ಶ್ರೀಮಠದಿಂದ ಸಚಿವೆಯನ್ನು ಶಾಲು ಹೊದಿಸಿ ಪ್ರಸಾದ ನೀಡಿ ಸನ್ಮಾನಿಸಲಾಯಿತು. ಈ ಸಚಿವೆ  ಭಾರತೀಯ ಸಂಸೃತಿ ಬಗ್ಗೆ ವಿಶೇಷ ಆದರವನ್ನು ಹೊಂದಿದ್ದು ಅನಿವಾಸಿ ಭಾರತೀಯರಿಗೆ ವಿಶೇಷ ಪ್ರೋತ್ಸಾಹವನ್ನು ನೀಡುವವರಾಗಿರುತ್ತಾರೆ.

 
 
 
 
 
 
 
 
 
 
 

Leave a Reply