ಆಸ್ಟ್ರೇಲಿಯನ್ ಸರಕಾರದ ಎಂ ಪಿ .ಮತ್ತು ಉಪಮುಖ್ಯ ಮಂತ್ರಿಯಾಗಿರುವ ಪ್ರುರೆ ಕಾರ್ ರವರನ್ನು (ಶಿಕ್ಷಣ ಸಚಿವೆ ) ಸಿಡ್ನಿ ಮಹಾನಗರದಲ್ಲಿ ಶ್ರೀ ಪುತ್ತಿಗೆ ಮಠದ ಪ್ರತಿನಿಧಿಗಳು ಭೇಟಿಯಾಗಿ ಶ್ರೀಗಳ ಅಪೇಕ್ಷೆ ಯಂತೆ ಮುಂಬರುವ ವಿಶ್ವ ಪ್ರಸಿದ್ಧ ಪರ್ಯಾಯ ಮಹೋತ್ಸವಕ್ಕೆ ಅತಿಥಿ ಯಾಗಿ ಭಾಗವಹಿಸುವಂತೆ
ಆಮಂತ್ರಣವನ್ನು ನೀಡಲಾಯಿತು .
ಆಮಂತ್ರಣವನ್ನು ಗೌರವದಿಂದ ಸ್ವೀಕರಿಸಿದ ಸಚಿವೆ ವೈಭವದ ಪರ್ಯಾಯದ ಬಗ್ಗೆ 800 ವರ್ಷ ಗಳಿಂದ ಬಂದ ಅನೂಚಾನ ಪದ್ಧತಿ ಬಗ್ಗೆ ತಿಳಿದುಕೊಂಡು ಅಚ್ಚರಿಗೊಂಡರು. ಶ್ರೀಗಳ ಕೋಟಿ ಗೀತಾ ಲೇಖನ ಯೋಜನೆಯ ಬಗ್ಗೆ ತಿಳಿದುಕೊಂಡು ಸಂತಸಪಟ್ಟು ಪರ್ಯಾಯಕ್ಕೆಆಗಮಿಸುವ ಕುರಿತಂತೆ ಆಶಯ ವ್ಯತಪಡಿಸಿದರು .
ಶ್ರೀಮಠದಿಂದ ಸಚಿವೆಯನ್ನು ಶಾಲು ಹೊದಿಸಿ ಪ್ರಸಾದ ನೀಡಿ ಸನ್ಮಾನಿಸಲಾಯಿತು. ಈ ಸಚಿವೆ ಭಾರತೀಯ ಸಂಸೃತಿ ಬಗ್ಗೆ ವಿಶೇಷ ಆದರವನ್ನು ಹೊಂದಿದ್ದು ಅನಿವಾಸಿ ಭಾರತೀಯರಿಗೆ ವಿಶೇಷ ಪ್ರೋತ್ಸಾಹವನ್ನು ನೀಡುವವರಾಗಿರುತ್ತಾರೆ.