ಮತ್ತೆ ಮತ್ತೆ ಧ್ವಜಾರೋಹಣದ ಸುಯೋಗ ಪಡೆದ ಉಡುಪಿ ಜಿಲ್ಲಾಧಿಕಾರಿ 

ಉಡುಪಿ ಜಿಲ್ಲೆಯಲ್ಲಿ ​ಮೊನ್ನೆ ತಾನೇ ​ಸ್ವಾತಂತ್ರ್ಯೋತ್ಸವ​ ಸಂಧರ್ಭದಲ್ಲಿ ಧ್ವಜಾರೋಹಣ ನಡೆಸಿದ ಜಿಲ್ಲಾಧಿಕಾರಿ ಯವರಿಗೆ, ಮತ್ತೆ ​ಕರ್ನಾಟಕ ರಾಜ್ಯೋತ್ಸವ​ ದಿನ ಧ್ವಜಾರೋಹಣ ಮಾಡುವ ಅವಕಾಶ ಲಭಿಸಿದೆ.ನವೆಂಬರ್ 1ರಂದು ​ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಇರುವುದರಿಂದ, 2020ನೇ ಸಾಲಿನ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡುವ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಯವರು​ ​ಆದೇಶ ಹೊರಡಿ ಸಿದ್ದಾರೆ.

​ಉಡುಪಿ ಜಿಲ್ಲಾಧಿಕಾರಿಗೆ ಮಾತ್ರ ಈ ಅವಕಾಶ..ಹೇಗೆ?​  ಉಡುಪಿ ಜಿಲ್ಲೆಗಳ ಉಸ್ತುವಾರಿ ಸಚಿವ​ ಹಾಗು  ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.​ ಆದುದರಿಂದ ನಮ್ಮ ಜಿಲ್ಲೆಗೆ ಉಸ್ತುವಾರಿ ಸಚಿವರ ನಿರಂತರ ಗೈರು ಹಾಜರಾಗುವ ಕಾರಣ ​ ಶಿಷ್ಟಾಚಾರ​ದಂತೆ ಈ ಬಾರಿಯೂ ಜಿಲ್ಲಾಧಿಕಾರಿ ಜಿ. ಜಗದೀಶ ಅವ​ರಿಗೆ  ಧ್ವಜಾರೋಹಣ ​ನಡೆಸುವ ಸುಯೋಗ ಒದಗಿ ಬಂದಿದೆ 

ಆದುದರಿಂದ ​ನವಂಬರ್ 1,ಕರ್ನಾಟಕ ರಾಜ್ಯೋತ್ಸವದಂದು ಉಡುಪಿ ಜಿಲ್ಲಾಧಿಕಾರಿ ಧ್ವಜಾರೋಹಣ ಮಾಡುವ ಅವಕಾಶ ಪಡೆದಿ ದ್ದಾ​​ರೆ.​​

 
 
 
 
 
 
 
 
 
 
 

Leave a Reply