ನ.​1​ರಂದು ಉಡುಪಿಯಲ್ಲಿ ಎಸ್‌ಪಿಬಿ ನೆನಪಿನಲ್ಲಿ ಕನ್ನಡ ರಾಜ್ಯೋತ್ಸವ​.

ಉಡುಪಿ: ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಮತ್ತು ಕಟಪಾಡಿ ದಿಶಾ ಕಮ್ಯೂನಿಕೇಷನ್ಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಗಾನಗಂಧರ್ವ ಎಸ್‌ಪಿಬಿ ನೆನಪಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ಎಸ್‌ಪಿಬಿ ಗೀತೆಗಾಯನ ಕಾರ್ಯಕ್ರಮ
ನ.​1ರಂದು ಮಧ್ಯಾಹ್ನ ​2.30ಕ್ಕೆ ಉಡುಪಿಯ ಮಲಬಾರ್ ಗೋಲ್ಡ್ ಶೋರೂಮ್ ಮಾಳಿಗೆಯಲ್ಲಿ ನಡೆಯಲಿದೆ.
​​
ಉಡುಪಿ ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ ಉದ್ಘಾಟಿಸಲಿರುವರು. ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯ ವ್ಯವಸ್ಥಾಪಕ ಹಫೀಜ್ ರೆಹಮಾನ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉಡುಪಿ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸ ಲಿರುವರು​. 

ಯುವ ಪ್ರತಿಭಾನ್ವಿತ ಕಲಾವಿದರಾದ ಪ್ರಕಾಶ ಸುವರ್ಣ ಕಟಪಾಡಿ, ದಯಾನಂದ ಡಿ.ಉಡುಪಿ, ರೋಹಿತ್ ಕುಮಾರ್ ಮಲ್ಪೆ, ನಾರಾಯಣಮೂರ್ತಿ ​ಲಕ್ಷ್ಮೀನಗರ ,​ ಸವಿತ  ಲಕ್ಷ್ಮೀನಗರ , ಸಚಿನ್ ಸಾಲ್ಯಾನ್ ಮಲ್ಪೆ, ಸುಷ್ಮೀತಾ ಎರ್ಮಾಳ್, ಎ.ಶಂಕರ್ ಸಾಲ್ಯಾನ್ ಅಂಬಲಪಾಡಿ, ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ, ಕುಮಾರಿ ವೈಷ್ಣವಿ ಜೋಗಿ ಉಡುಪಿ, ಶಗುನ್ ಶೆಟ್ಟಿ ಕಿನ್ನಿಮೂಲ್ಕಿ ಅವರು ಎಸ್‌ಪಿಬಿ ಗೀತೆಗಳನ್ನು ಹಾಡಿ ರಂಜಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.
 
 
 
 
 
 
 
 
 
 
 

Leave a Reply