ಶ್ರೀ ವೆಂಕಟರಮಣ ದೇವಸ್ಥಾನ ಕಲ್ಯಾಣಪುರ ಲೋಕ ಕಲ್ಯಾಣಾರ್ಥ ಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣ ಮೊಹೋತ್ಸವ ದೇವಳದ ಕಲಾ ಮಂದಿರದಲ್ಲಿ ಶನಿವಾರ ನೆಡೆಯಿತು.
ಧಾರ್ಮಿಕ ಪೂಜಾ ವಿಧಾನಗಳನ್ನು ಚೇಂಪಿ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಸಾಮೂಹಿಕ ಪ್ರಾಥನೆ, ನವಗ್ರಹ ಹೋಮ, ಪಂಚಾಮೃತ ಅಭಿಶೇಷಕ, ವಿಶೇಷ ಅಲಂಕಾರ, ಭಜನಾ ಕಾರ್ಯಕ್ರ್ರಮ ನೆಡೆಯಿತು.
ಸಂಜೆ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರನ್ನು ಪೂರ್ಣ ಕುಂಭ ಸ್ವಾಗತಿಸಿ , ಪಾದ ಪೂಜೆ, ದೇವಳದ ಜೀರ್ಣವೋದ್ಧಾರ ಬಗ್ಗೆ ಮನವಿ ಪತ್ರ ಬಿಡುಗಡೆಗೊಳಿಸಿ, ದೇವಳದಲ್ಲಿ ಶ್ರೀನಿವಾಸ ಕಲ್ಯಾಣದಿಂದ ದೇವಾಲಯದ ಜೀರ್ಣವೋದ್ಧಾರ ಕೆಲಸ ಶೀಘ್ರ ಪೂರ್ಣ ಗೊಂಡು ಭಕ್ತರ ಕಲ್ಯಾಣವಾಗಲಿ ಆಶೀರ್ವಚನಗೈದರು. ಶ್ರೀ ದೇವರಿಗೆ ಮಹಾ ಮಂಗ ಳಾರತಿ ಬೆಳಗಿಸಿ ಫಲ ಮಂತ್ರಾಕ್ಷತೆಯ ಪ್ರಸಾದ ನೀಡಿ ಅನುಗ್ರಹಸಿದರು. ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮಾನಾಭ ಕಿಣಿ, ಪ್ರಧಾನ ಅರ್ಚಕ ಜಯದೇವ ಭಟ್, ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷ ಕೆ. ಮುರಳೀಧರ ಬಾಳಿಗಾ, ಟಿ. ಅಶೋಕ್ ಮಾಧವ ಪೈ, ಗಣಪತಿ ಭಟ್, ಅರವಿಂದ ಬಾಳಿಗಾ, ಸುದೇಶ್ ಭಟ್, ಕಾಶೀನಾಥ್ ಭಟ್, ರಮೇಶ ಭಟ್, ರಮಾನಾಥ್ ಶಾನುಬೋಗ್, ಜಿ ಎಸ್ ಬಿ ಸಭಾ ಮಂಡಳಿಯ ಸದಸ್ಯರು, ಜಿ ಎಸ್ ಬಿ ಮಹಿಳಾ ಮತ್ತು ಯುವಕ ಮಂಡಳಿಯ ಸದಸ್ಯರು, ಸಾವಿರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.