ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹ ಅಭಿಯಾನ

ಶೀಘ್ರವೇ ಚೆನ್ನೈಯಲ್ಲಿ ಉದ್ಯಮಿಗಳ ಸಮಾವೇಶ : ಕೆ ರಾಜೇಶ್ ರಾವ್

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮಮಂದಿರ ನಿರ್ಮಾಣ ಕ್ಕೆ ದೇಶದ ಸಮಸ್ತ ಜನತೆಯ ಸಹಕಾರ ಪಡೆಯುವ ಉದ್ದೇಶದಿಂದ ಜನವರಿ 15 ರಿಂದ ದೇಶಾದ್ಯಂತ ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ . ಈ ಉದ್ದೇಶಕ್ಕಾಗಿ ತಮಿಳುನಾಡಿನ ಉದ್ಯಮಿಗಳ ಸಮಾವೇಶವನ್ನು ಚೆನ್ನೈ ನಲ್ಲಿ ನಡೆಸಲಾಗುವುದು ಎಂದು ಜಗತ್ಪ್ರಸಿದ್ಧ ವುಡ್ ಲ್ಯಾಂಡ್ಸ್ ಹೋಟೆಲ್ಸ್ ನ ಪಾಲುದಾರ ತರುಣ ಉದ್ಯಮಿ ಕೆ ರಾಜೇಶ್ ರಾವ್ ತಿಳಿಸಿದ್ದಾರೆ.

ಚೆನ್ನೈ ಮೈಲಾಪುರದಲ್ಲಿರುವ ವುಡ್ ಲ್ಯಾಂಡ್ಸ್ ಹೋಟೆಲ್ ಅತಿಥಿ ಗೃಹದಲ್ಲಿ ಅಯೋಧ್ಯೆ ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶ್ರೀ ರಾವ್ , ತಮಿಳುನಾಡಿನ ಸ್ವರ್ಣ , ವಸ್ತ್ರ , ಹೋಟೆಲ್ , ರಿಯಲ್ ಎಸ್ಟೇಟ್ , ಸಾಫ್ಟ್ ವೇರ್ , ಹೀಗೆ ವಿವಿಧ ಉದ್ಯಮಿಗಳ ದೊಡ್ಡ ಸಮೂಹವಿದ್ದು ಅವರೆಲ್ಲರನ್ನು ಸೇರಿಸಿಕೊಂಡು ಒಂದು ದೊಡ್ಡ ಸಮಾವೇಶ ನಡೆಸಲಾಗುವುದು .

ಇದರಲ್ಲಿ ಪೇಜಾವರ ಶ್ರೀಗಳು ಭಾಗವಹಿಸಿ ಮಾರ್ಗದರ್ಶನ ನೀಡುವಂತೆ ವಿನಂತಿಸಲಾಗಿದ್ದು ಅವರು ಒಪ್ಪಿಗೆಯನ್ನೂ ಸೂಚಿಸಿದ್ದಾರೆ . ಈ ಸಮಾವೇಶ ದಲ್ಲಿ ಪ್ರತೀ ಉದ್ಯಮಿಗಳೂ ತಮ್ಮ ದೇಣಿಗೆಯನ್ನು ಶ್ರೀಗಳ ಮೂಲಕ ಅಯೋಧ್ಯೆ ಮಂದಿರ ಟ್ರಸ್ಟ್ ಗೆ ಹಸ್ತಾಂತರಿಸುವರು .ಎಂದು ಉಡುಪಿ ಕೃಷ್ಣ ಮಠ ಮತ್ತು ಅಷ್ಟ ಮಠಗಳ‌ ವಿಶೇಷ ಭಕ್ತರೂ ಆಗಿರುವ ರಾಜೇಶ್ ರಾವ್ ತಿಳಿಸಿದ್ದಾರೆ .

ಈ ಸಮಾಲೋಚನಾ ಸಭೆಯಲ್ಲಿ ವುಡ್ ಲ್ಯಾಂಡ್ಸ್ ಸಮೂಹದ ಮತ್ತೋರ್ ಹಿರಿಯರಾದ ಕೆ ಮುರಳಿ ರಾವ್ ತಮಿಳುನಾಡಿನ ಸಂಘ ಪರಿವಾರದ ಪ್ರಮುಖರೂ ಉಪಸ್ಥಿತರಿದ್ದರು . ಸಂತ ಸಮಾವೇಶ, ಇದೇ ಉದ್ದೇಶಕ್ಕಾಗಿ ಚೆನ್ನೈನಲ್ಲಿ ತಮಿಳುನಾಡಿನ ನೂರಾರು ಸಾಧು ಸಂತರು , ಮಠಾಧೀಶರು , ಧಾರ್ಮಿಕ ಮುಖಂಡರ ಸಮಾವೇಶವನ್ನೂ ಜನವರಿ ತಿಂಗಳಲ್ಲಿ ಆಯೋಜಿಸಿ ಅವರೆಲ್ಲರ ಮಾರ್ಗದರ್ಶನ ಸಹಕಾರ ಪಡೆಯಲಾಗುವುದು ಎಂದು ತಮಿಳುನಾಡಿನ‌ ಉತ್ತರ ಪ್ರಾಂತ ವಿಶ್ವ ಹಿಂದು ಪರಿಷತ್ ಅಧ್ಯಕ್ಷ , ನ್ಯಾಯವಾದಿಯೂ ಆಗಿರುವ ಶ್ರೀನಿವಾಸನ್ ಶ್ರೀಗಳಿಗೆ ತಿಳಿಸಿದ್ದು ಈ ಸಮಾವೇಶದಲ್ಲೂ ಪೇಜಾವರ ಶ್ರೀಗಳು ಭಾಗವಹಿಸುವಂತೆ ಬಿನ್ನವಿಸಿದ್ದಾರೆ .

 
 
 
 
 
 
 
 
 
 
 

Leave a Reply