ಉಡುಪಿಯಲ್ಲಿ ಈ ಬಾರಿಯೂ ಶ್ರೀ ಕೃಷ್ಣಜನ್ಮಾಷ್ಟಮಿಯ ಸಂಭ್ರಮ ಇಲ್ಲ

ಉಡುಪಿ, ಆ 27  ಕೃಷ್ಣನ ನೆಲೆವೀಡು ಉಡುಪಿಯಲ್ಲಿ ಪ್ರತಿವರ್ಷ ಶ್ರೀ ಕೃಷ್ಣಜನ್ಮಾಷ್ಟಮಿ ವೈಭವದಿಂದ ವೈಭವದಿಂದ ಆಚರಿಸಲಾಗುತ್ತಿತ್ತು. ಸಾವಿರಾರು ಜನರು  ವಿಟ್ಲಪಿಂಡಿ ಮಹೋತ್ಸವಕ್ಕೆ ಆಗಮಿಸುತ್ತಿದ್ದರು.  

ಆದರೆ ಈ ಬಾರಿಯೂ ಕರೋನಾಸುರನ ಆರ್ಭಟದಿಂದಾಗಿ ವಿಜೃಂಭಣೆ ಇಲ್ಲದೆ  ಸಂಪ್ರದಾಯ ಬದ್ಧವಾಗಿ, ಸರಳವಾಗಿ  ನಡೆಯಲಿದೆ. ಕಳೆದ ವರ್ಷವೂ ಕೋವಿಡ್‌ ನಿಂದಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿಯೇ ಆಚರಿಸಲಾಗಿತ್ತು.

ಈ ಬಾರಿಯೂ ಆ.30 -31ರಂದು ಕೋವೀಡ್‌ ನಿಯಂತ್ರಣ ನಿಯಮಗಳಡಿ ಸರಳವಾಗಿ ಆಚರಿಸಲು ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ನಿರ್ಧರಿಸಿದ್ದಾರೆ.  

ಮಠದೊಳಗಿನ ಧಾರ್ಮಿಕ ಆಚರಣೆಗಳು ಎಂದಿನಂತೆಯೇ ನಡೆಯುತ್ತವೆ. ಅ.30 ರಂದು ಅರ್ಘ್ಯ ಪ್ರದಾನ, ಆ 31 ರಂದು ಅಪರಾಹ್ನ ರಥಬೀದಿಯಲ್ಲಿ ಲೀಲೋತ್ಸವ – ವಿಟ್ಲಪಿಂಡಿ ಉತ್ಸವ ನಡೆಸಲು ಸಕಲ ಸಿದ್ದತೆಗಳನ್ನು ನಡೆಸಲಾಗುತ್ತಿದೆ. 

 
 
 
 
 
 
 
 
 
 
 

Leave a Reply