ಉಡುಪಿ, ಆ 27 ಕೃಷ್ಣನ ನೆಲೆವೀಡು ಉಡುಪಿಯಲ್ಲಿ ಪ್ರತಿವರ್ಷ ಶ್ರೀ ಕೃಷ್ಣಜನ್ಮಾಷ್ಟಮಿ ವೈಭವದಿಂದ ವೈಭವದಿಂದ ಆಚರಿಸಲಾಗುತ್ತಿತ್ತು. ಸಾವಿರಾರು ಜನರು ವಿಟ್ಲಪಿಂಡಿ ಮಹೋತ್ಸವಕ್ಕೆ ಆಗಮಿಸುತ್ತಿದ್ದರು.
ಆದರೆ ಈ ಬಾರಿಯೂ ಕರೋನಾಸುರನ ಆರ್ಭಟದಿಂದಾಗಿ ವಿಜೃಂಭಣೆ ಇಲ್ಲದೆ ಸಂಪ್ರದಾಯ ಬದ್ಧವಾಗಿ, ಸರಳವಾಗಿ ನಡೆಯಲಿದೆ. ಕಳೆದ ವರ್ಷವೂ ಕೋವಿಡ್ ನಿಂದಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿಯೇ ಆಚರಿಸಲಾಗಿತ್ತು.
ಈ ಬಾರಿಯೂ ಆ.30 -31ರಂದು ಕೋವೀಡ್ ನಿಯಂತ್ರಣ ನಿಯಮಗಳಡಿ ಸರಳವಾಗಿ ಆಚರಿಸಲು ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ನಿರ್ಧರಿಸಿದ್ದಾರೆ.
ಮಠದೊಳಗಿನ ಧಾರ್ಮಿಕ ಆಚರಣೆಗಳು ಎಂದಿನಂತೆಯೇ ನಡೆಯುತ್ತವೆ. ಅ.30 ರಂದು ಅರ್ಘ್ಯ ಪ್ರದಾನ, ಆ 31 ರಂದು ಅಪರಾಹ್ನ ರಥಬೀದಿಯಲ್ಲಿ ಲೀಲೋತ್ಸವ – ವಿಟ್ಲಪಿಂಡಿ ಉತ್ಸವ ನಡೆಸಲು ಸಕಲ ಸಿದ್ದತೆಗಳನ್ನು ನಡೆಸಲಾಗುತ್ತಿದೆ.